ಹೊಸದಿಂಗತ ಡಿಜಿಟಲ್ ಡೆಸ್ಕ್:
37ನೇ ಶರಣ ಮೇಳದಲ್ಲಿ ಸಿಎಂಗೆ ದಾಸೋಹರತ್ನ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಈ ಪ್ರಶಸ್ತಿ ಮೂಲಕ ಮುಖ್ಯಮಂತ್ರಿಗಳಿಗೆ ಗೌರವಿಸಲಾಗಿದೆ.
ಕೂಡಲಸಂಗಮದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಣೆ ದೇವರೇನಾದ್ರು ಹಣೆ ಬರಹ ಬರೀತಾನಾ, ನರಕ ಸ್ವರ್ಗ ಅನ್ನೋದೆ ಇಲ್ಲಾ. ಆ ಧರ್ಮ, ಈ ಧರ್ಮ ಅಂತ ಹೇಳೋಕೆ ಹೋಗಬಾರದು ಎಂದು ಸಿಎಂ ಹೇಳಿದ್ದಾರೆ.
ಆದರೆ ಈ ಜಾತಿ ವ್ಯವಸ್ಥೆಯನ್ನು ಅದನ್ನು ಹೋಗಲಾಡಿಸೋದು ಬಸವಾದಿ ಶರಣರಿಂದ ಮಾತ್ರ ಸಾಧ್ಯ ಜಾತಿ ವ್ಯವಸ್ಥೆ ಗಟ್ಟಿಯಾಗಿದೆ ಮತ್ತು ಬಸವಾದಿ ಶರಣರಿಂದ ಚಳುವಳಿ ಮುಂದುವರೆಯದ ಕಾರಣ ಜಾತಿ ವ್ಯವಸ್ಥೆ ಮುಂದುವರೆಯಿತು ಎಂದು ಸಿಎಂ ಹೇಳಿದ್ದಾರೆ.