ಹೊಸದಿಗಂತ ಡಿಜಿಟಲ್ ಡೆಸ್ಕ್
ಸ್ವಾತಂತ್ರ್ಯ ಹೋರಾಟಗಾರ ವೆಂಕಟರಾಜ ರಾವ್ ಅವರು 13 ಜೂನ್ 1917ರಂದು ಜನಿಸಿದರು. ಅವರು ಪುದುಚೇರಿಯ ಯಾನಂ ಮೂಲದವರು. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಯಾನಂ ಶಾಲೆಯಲ್ಲಿ ಮತ್ತು ನಂತರ ಪುದುಚೇರಿಯ ಫ್ರೆಂಚ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಆ ಬಳಿಕ ಅವರು ಯಾನಂನ ಮೊದಲ ಉಪಮೇಯರ್ ಆದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಪಾಂಡಿಚೇರಿ, ಚಂದ್ರನಾಗೂರು, ಮಾಹೆ, ಕಾರೈಕಲ್ ಮತ್ತು ಯಾನಂಗಳಿಗೆ ಫ್ರೆಂಚರಿಂದ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ವೆಂಕಟರಾಜ ರಾವ್ ಅವರು 1954 ರ ವಿಮೋಚನಾ ಪಾಂಡಿಚೇರಿ ಚಳವಳಿಯಲ್ಲಿ ಭಾಗವಹಿಸಿದರು. ಅವರು 13 ಜೂನ್ 1954 ರಿಂದ 1 ನವೆಂಬರ್ 1954 ರವರೆಗೆ ಯಾನಂನಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ಸರ್ಕಾರದ ಸದಸ್ಯರಾಗಿದ್ದರು. ವಿಮೋಚನಾ ಚಳವಳಿಯಲ್ಲಿ ಅವರ ಪಾತ್ರಕ್ಕಾಗಿ ಅವರಿಗೆ ರಾಜ್ಯ ಪ್ರಶಸ್ತಿಯನ್ನು ನೀಡಲಾಯಿತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ