ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುದ್ಧನೌಕೆ ‘ಮಹೇಂದ್ರಗಿರಿ’ಯನ್ನು ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಪತ್ನಿ ಸುದೇಶ್ ಧನ್ಕರ್ ಅವರು ಭಾರತೀಯ ನೌಕಾಪಡೆಗೆ ಸಮರ್ಪಿಸಿದರು.
ಶುಕ್ರವಾರ ಮುಂಬೈ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ನೌಕಾಪಡೆಗೆ ಸಮರ್ಪಿಸಲಾಯಿತು.
ಮಜಗಾಂವ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ (ಎಂಡಿಎಲ್) ಅಭಿವೃದ್ಧಿಪಡಿಸಿರುವ ಈ ಯುದ್ಧನೌಕೆ ಜಲಾಂತರ್ಗಾಮಿಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ.
‘ಪ್ರಾಜೆಕ್ಟ್ 17ಎ’ ಅಡಿ ನೌಕಾಪಡೆಗೆ ಸಮರ್ಪಿಸಲಾಗಿರುವ ಕೊನೆಯ ಹಾಗೂ ಏಳನೇ ಯುದ್ಧನೌಕೆ ಇದಾಗಿದ್ದು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸಂವೇದಕಗಳು ಮತ್ತು ಅತ್ಯುತ್ಯಮ ನಿರ್ವಹಣಾ ಸಿಸ್ಟಮ್ಗಳನ್ನು ಒಳಗೊಂಡಿದೆ. ಒಡಿಶಾದ ಪೂರ್ವ ಘಟ್ಟದಲ್ಲಿರುವ ಮಹೇಂದ್ರಗಿರಿ ಪರ್ವತದ ಹೆಸರನ್ನೇ ಈ ನೌಕೆಗೆ ಇಡಲಾಗಿದೆ.
.