ಮೇಲೊಂದು ಒಳಗೊಂದು ಮಾತಾಡೋಕೆ ಬರೋದಿಲ್ಲ, ದರ್ಶನ್ ಜೊತೆಗಿನ ಮನಸ್ತಾಪದ ಬಗ್ಗೆ ಮಾತನಾಡಿದ ಧ್ರುವ ಸರ್ಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ದರ್ಶನ್ ಹಾಗೂ ಧ್ರುವ ಸರ್ಜಾ ಮಧ್ಯೆ ಮನಸ್ತಾನ ಇರುವ ವಿಷಯ ನಿಜ ಎಂಬಂತಾಗಿದೆ, ಇದಕ್ಕೆ ನಿದರ್ಶನದಂತೆ ಧ್ರುವ ಸರ್ಜಾ ಮಾತನಾಡಿದ್ದಾರೆ.

ಧ್ರುವ ಸರ್ಜಾ ಜನ್ಮದಿನವನ್ನು ಆಚರಿಸಿಕೊಳ್ಳುವ ವೇಳೆ ಈ ಬಗ್ಗೆ ಮಾತನಾಡಿದ್ದು, ನನಗೆ ಹೊರಗೊಂದು ಒಳಗೊಂದು ಮಾತನಾಡೋಕೆ ಬರೋದಿಲ್ಲ. ದರ್ಶನ್ ಅವರ ಮೇಲೆ ಗೌರವ ಇದೆ, ಅವರ ಅನುಪಸ್ಥಿತಿ ಅಥವಾ ಉಪಸ್ಥಿತಿ ಎರಡೂ ವೇಳೆ ಗೌರವ ಕೊಡ್ತೇನೆ, ಅವರು ಹಿರಿಯ ನಟ, ಆದರೆ ನನ್ನ ಬಳಿ ಒಂದೆರಡು ಪ್ರಶ್ನೆ ಇದೆ, ಬಹಿರಂಗವಾಗಿ ಕೇಳೋಕಾಗೋದಿಲ್ಲ. ಅವರನ್ನೇ ಖುದ್ದು ಕೇಳ್ತೇನೆ. ನನ್ನ ಹೆಸರಿನಲ್ಲಿ ಫೇಕ್ ಅಕೌಂಟ್ ಮಾಡಿ ದರ್ಶನ್ ವಿರುದ್ಧ ಪೋಸ್ಟ್ ಮಾಡೋದನ್ನು ಗಮನಿಸಿದ್ದೇನೆ, ಇದು ತಪ್ಪು, ಅಪಪ್ರಚಾರ ಮಾಡೋರು ನನ್ನ ಕೈಗೆ ಸಿಕ್ಕಿಹಾಕಿಕೊಳ್ಳಬೇಡಿ ಎಂದು ಧ್ರುವ ಸಿಟ್ಟಾಗಿದ್ದಾರೆ.

ಒಟ್ಟಾರೆ ಮನಸ್ತಾಪ ಇರೋದಂತೂ ಪಕ್ಕಾ, ಆದರೆ ಯಾವ ವಿಚಾರವಾಗಿ ಅನ್ನೋದು ಮಾತ್ರ ನಿಗೂಢವಾಗಿಯೇ ಉಳಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!