ಬೆಳಗ್ಗೆ ಎದ್ದ ನಂತರ ಮಾಡುವ ಮೊದಲ ಕೆಲಸ ಹೊಟ್ಟೆಗೆ ಒಂದಿಷ್ಟು ನೀರು ಕುಡಿಯೋದು, ತಣ್ಣಿರನ್ನು ಕುಡಿದರೆ ಏನೂ ಲಾಭ ಇಲ್ಲ, ಬರೀ ಬಿಸಿನೀರು ಕುಡಿದರೆ ಮಾತ್ರ ಲಾಭ ಎಂದು ಅಂದುಕೊಂಡಿದ್ದರೆ ತಪ್ಪು. ತಣ್ಣೀರು ಕುಡಿಯುವುದರಿಂದಲೂ ಲಾಭ ಇದೆ.
- ತಣ್ಣೀರು ದೇಹವನ್ನು ಶುಚಿಯಾಗಿ ಇಟ್ಟುಕೊಳ್ಳುತ್ತದೆ. ಮತ್ತೆ ನೀವು ತಿನ್ನುವ ನ್ಯೂಟ್ರಿಯಂಟ್ಸ್ಗಳನ್ನು ಅಬ್ಸರ್ವ್ ಮಾಡುವ ಶಕ್ತಿ ಹೆಚ್ಚಿಸುತ್ತದೆ.
- ತಣ್ಣೀರು ಕುಡಿಯುವುದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ರಾತ್ರಿ ಮಲಗುವಾಗಲೂ ಒಂದು ಲೋಟ ನೀರು ಕುಡಿದು ಮಲಗಬಹುದು.
- ಜಿಮ್, ಯೋಗ ಅಥವಾ ವಾಕ್ ಮಾಡಬೇಕು ಎಂದಾದರೆ ನೀರು ಕುಡಿದು ಮಾಡಿ, ನಿಮಗೆ ಶಕ್ತಿ ನೀಡುತ್ತದೆ.
- ಬೆಳಗ್ಗೆ ಎದ್ದ ತಕ್ಷಣ ತಲೆನೋವು ಇರುವವರು ಖಂಡಿತಾ ನೀರು ಕುಡಿಯಿರಿ. ತಲೆನೋವು ಕಡಿಮೆಯಾಗುತ್ತದೆ.
- ತೂಕ ಇಳಿಕೆಗೆ ತಣ್ಣೀರು ಸಹಕಾರಿ
- ಮಲಬದ್ಧತೆ ಸಮಸ್ಯೆ ಇರುವವರು ಬೆಳಗ್ಗೆ ಒಂದು ಲೋಟ ನೀರು ಕುಡಿಯಿರಿ. ಮಲಬದ್ಧತೆ ದೂರಾಗುತ್ತದೆ.
- ದೇಹದ ಎಲ್ಲಾ ಕೊಳೆಗಳನ್ನು ತೊಳೆಯುವ ಶಕ್ತಿ ನೀರಿಗಿದೆ.