ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾನಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಈ ಜೋಡಿ ಬಗ್ಗೆ ಖ್ಯಾತ ಜ್ಯೋತಿಷಿ ವಿನೋದ್ ಕುಮಾರ್ ಭವಿಷ್ಯ ನುಡಿದಿದ್ದಾರೆ. ಇವರ ಪ್ರಕಾರ ಸಿದ್ಧಾರ್ಥ್ ಹಾಗೂ ಕಿಯಾರಾ ಜೋಡಿ ಸದಾಕಾಲ ಸುಖವಾಗಿ ಬಾಳುತ್ತಾರಂತೆ, ಇವರ ಸಂಬಂಧ ತುಂಬಾನೇ ಗಟ್ಟಿಯಾಗಿದೆ ಎಂದು ಜ್ಯೋತಿಷಿ ಹೇಳಿದ್ದಾರೆ.
ಸಿದ್ಧಾರ್ಥ್ ಭಾವನೆಗಳಿಗೆ ಬೆಲೆ ಕೊಡುವ ವ್ಯಕ್ತಿ, ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಪತ್ನಿ ಕಿಯಾರಾ ಜತೆ ಮಾತುಕತೆ ನಡೆಸೋದು ತುಂಬಾ ಮುಖ್ಯವಾಗಿದೆ. ಅಲ್ಲದೆ ದಾಂಪತ್ಯದ ವಿಷಯದಲ್ಲಿ ಇವರಿಗೆ ಹಿರಿಯ ಸಲಹೆ ಬೇಕಾಗುತ್ತದೆ ಎಂದು ಜ್ಯೋತಿಷಿ ಹೇಳಿದ್ದಾರೆ.