ಹಣ ಕೊಟ್ಟು ನೌಕರಿ ಹಿಡಿದವರು ಬಡವರ ಕೆಲಸ ಮಾಡ್ತಾರಾ?: ಹೆಚ್.ಡಿ. ಕುಮಾರಸ್ವಾಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಕೇವಲ ದುಡ್ಡಿರುವವರು ಮಾತ್ರ ಇರುತ್ತಾರೆ. ಬಡವರಿಗೆ, ಪ್ರಾಮಾಣಿಕರಿಗೆ ಜಾಗವೇ ಇರುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಪಿಎಸ್‌ಐ ಹುದ್ದೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಪಿಎಸ್‌ಐ ಪ್ರಕರಣದಲ್ಲಿ ಪಿಶಾಚಿಗಳು ಹಣ ಮಾಡಲು ಹೊರಟಿದ್ದರು. ಮುಂಜಾಗೃತೆ ವಹಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಹಣ ಕೊಟ್ಟು ನೌಕರಿ ಹಿಡಿದವರು ಬಡವರ ಕೆಲಸ ಮಾಡ್ತಾರಾ ? ಎಂದು ಪ್ರಶ್ನಿಸಿದ್ದಾರೆ.
ಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯ ಆಗಬಾರದು. ಯಾರೋ ಹೇಳಿದರು ಎಂದು ಈಗ ಏಕಾಏಕಿ ಪಿಎಸ್‌ಐ ಆಯ್ಕೆಯನ್ನೇ ರದ್ದು ಮಾಡಿರುವ ಸರ್ಕಾರದ ಕ್ರಮ ಸರಿಯಲ್ಲ. ಇದರಿಂದ ಬಡ, ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!