ಪೊಲೀಸರನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ಆಪ್ ರಾಜಕೀಯಕ್ಕೆ ತಿರುಗೇಟು- ಬಗ್ಗಾರನ್ನು ಮರಳಿ ಕರೆತಂದ ದೆಹಲಿ ಪೊಲೀಸರು

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಅರವಿಂದ ಕೇಜ್ರಿವಾಲ್ ಪರವಾಗಿ ರಾಜಕೀಯ ವಿರೋಧಿಗಳನ್ನು ಹೆದರಿಸುವುದಕ್ಕೆ ಪಂಜಾಬ್ ಪೊಲೀಸರನ್ನು ಬಳಸಿಕೊಳ್ಳುವ ಆಮ್ ಆದ್ಮಿ ಪಕ್ಷದ ರಾಜಕೀಯಕ್ಕೆ ತಿರುಗೇಟು ಬಿದ್ದಿದೆ.

ದೆಹಲಿ ನಿವಾಸಿ ಬಿಜೆಪಿ ನೇತಾರ ತೇಜಿಂದರ್ ಬಗ್ಗಾ ಅವರನ್ನು ದೆಹಲಿಯಿಂದ ಬಂಧಿಸಿ ಕರೆದೊಯ್ಯುತ್ತಿದ್ದಾಗ ಹರ್ಯಾಣ ಪೊಲೀಸರು ಬೆಂಗಾವಲು ಪಡೆಯನ್ನು ಕುರುಕ್ಷೇತ್ರದಲ್ಲಿ ತಡೆದರು. ಇದೀಗ, ಎ ಎನ್ ಐ ವರದಿ ಮಾಡಿರುವ ಪ್ರಕಾರ ಬಗ್ಗಾ ಅವರನ್ನು ದೆಹಲಿ ಪೊಲೀಸರು ಮರಳಿ ಕರೆತಂದಿದ್ದಾರೆ.

ಬೆಳಗಿನಿಂದ ತೆರೆದುಕೊಂಡಿದ್ದ ಈ ಪ್ರಹಸನದ ಹಿನ್ನೆಲೆಯನ್ನು ನೀವು ಈ ಹಿಂದಿನ ನಮ್ಮ ವರದಿ ಓದಿ ತಿಳಿದುಕೊಳ್ಳಬಹುದು. ಪೊಲೀಸ್ ವರ್ಸಸ್ ಪೊಲೀಸ್- ಬಿಜೆಪಿ ನೇತಾರ ತೇಜಿಂದರ್ ಬಗ್ಗಾ ಹೊತ್ತೊಯ್ದ ಪ್ರಕರಣಕ್ಕೆ ತಿರುವು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!