Wednesday, June 7, 2023

Latest Posts

ಮತ್ತೊಂದು ಮದ್ಯ ಹಗರಣ ಬಯಲಿಗೆ: ಐಎಎಸ್ ಅಧಿಕಾರಿಯೇ ಪ್ರಮುಖ ಪಾತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಛತ್ತೀಸ್‌ಗಢ ಮದ್ಯ ಹಗರಣದಲ್ಲಿ ಭಾರೀ ಭ್ರಷ್ಟಾಚಾರ ಬಯಲಾಗಿದೆ ಎಂದು ಇಡಿ ಆರೋಪಿಸಿದೆ. ಈ ಹಗರಣದಲ್ಲಿ 2 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಬಯಲಾಗಿದೆ. ಈ ಭ್ರಷ್ಟಾಚಾರದ ಹಣವನ್ನು ಚುನಾವಣೆಗೆ ಹರಿಸಲಾಗಿದೆ. ಇಡಿ ಮೇ 6 ರಂದು ಕಾಂಗ್ರೆಸ್ ನಾಯಕ ಮತ್ತು ರಾಯ್‌ಪುರ ಮೇಯರ್ ಐಜಾಜ್ ಧೇಬರ್ ಅವರ ಸಹೋದರ ಅನ್ವರ್ ಧೇಬರ್ ಅವರನ್ನು ಮದ್ಯ ಹಗರಣದಲ್ಲಿ ಬಂಧಿಸಿತ್ತು.

ಈ ಸಂದರ್ಭದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಸಾಕ್ಷ್ಯಗಳು ಸಿಕ್ಕಿವೆ. ರಾಜ್ಯದಲ್ಲಿ ಮಾರಾಟವಾಗುವ ಪ್ರತಿ ಬಾಟಲಿ ಮದ್ಯದ ಮೇಲೆ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಉನ್ನತ ಮಟ್ಟದ ರಾಜಕಾರಣಿಗಳು ಮತ್ತು ಅಧಿಕಾರಿಗಳು ತೊಡಗಿದ್ದಾರೆ ಎಂದು ಇಡಿ ಹೇಳಿದೆ. 2019-2022ರ ನಡುವೆ ಸಾವಿರ ಕೋಟಿಗಳ ರೂಪಾಯಿ ಬೃಹತ್ ಭ್ರಷ್ಟಾಚಾರ ನಡೆದಿದೆ ಎಂದು ಇಡಿ ಬಹಿರಂಗಪಡಿಸಿದೆ. ಇದರಲ್ಲಿ ಐಎಎಸ್ ಅಧಿಕಾರಿ ಅನಿಲ್ ತುತೇಜಾ ಪ್ರಮುಖ ಪಾತ್ರ ವಹಿಸಿದ್ದು, ರಾಯ್‌ಪುರ ಮೇಯರ್ ಅವರ ಸಹೋದರ ಅನ್ವರ್ ಧೇಬರ್ ಕೂಡ ಭಾಗಿಯಾಗಿದ್ದಾರೆ.

ಇಡಿ ಪ್ರಕಾರ ರಾಜ್ಯದಲ್ಲಿ ಶೇ.30-40ರಷ್ಟು ಮದ್ಯ ಮಾರಾಟ ಅಕ್ರಮವಾಗಿ ನಡೆದಿದೆ. ಇಡಿ ಶನಿವಾರ ರಾಯ್‌ಪುರದ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಮದ್ಯದ ವ್ಯಾಪಾರಿ ಅನ್ವರ್ ಧೇಬರ್‌ನನ್ನು ರಿಮಾಂಡ್‌ಗೆ ಆದೇಶಿಸುವಂತೆ ನ್ಯಾಯಾಲಯವನ್ನು ಕೇಳಿದೆ. ಇಡಿ ಶನಿವಾರ ರಾಯಪುರದ ಹೋಟೆಲ್‌ನಲ್ಲಿ ಅನ್ವರ್ ಧೇಬರ್‌ನನ್ನು ಬಂಧಿಸಿದೆ. ಹವಾಲಾ ವಿಶೇಷ ನ್ಯಾಯಾಲಯ ಅವರನ್ನು ನಾಲ್ಕು ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿದೆ. ಏಳು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ವಿಚಾರಣೆಗೆ ಹಾಜರಾಗದೆ ಬೇನಾಮಿ ಸಿಮ್ ಕಾರ್ಡ್ ಬದಲಿಸಿ ಪರಾರಿಯಾಗುತ್ತಿದ್ದ ಅನ್ವರ್ ಅವರನ್ನು ಬಂಧಿಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಗರಣದಲ್ಲಿ ಐಎಎಸ್ ಅಧಿಕಾರಿ ಪ್ರಮುಖ ಪಾತ್ರ ವಹಿಸಿದೆ ಎಂದು ಇಡಿ ಹೇಳಿದೆ. 2003ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಅನಿಲ್ ತುತೇಜಾ ಅವರು ಪ್ರಸ್ತುತ ರಾಜ್ಯದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!