ಹೊಸದಿಗಂತ ಡಿಜಿಟಲ್ ಡೆಸ್ಕ್
ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮ ಮುಂದುವರೆದಿದೆ. ಇದೀಗ ಮತ್ತೊಬ್ಬ ಸಚಿವ ಏಕನಾಥ ಶಿಂದೆ ಬಣಕ್ಕೆ ಸೇರಿದ್ದಾರೆ. ಈ ಮೂಲಕ ಎಂಟನೇ ಸಚಿವ ಬಂಡಾಯದ ಬಾವುಟ ಹಾರಿಸಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾವಿಕಾಸ್ ಆಘಾಡಿ ಸರ್ಕಾರದ ವಿರುದ್ಧ ಏಕನಾಥ ಶಿಂದೆ ಬಂಡಾಯ ಸಾರಿದ್ದಾರೆ. ದಿನೇ ದಿನೇ ರಾಜಕೀಯ ಆಟ ಜೋರಾಗಿದೆ. ಈಗಾಗಲೇ 40ಕ್ಕೂ ಅಧಿಕ ಶಾಸಕರನ್ನು ಕಟ್ಟಿಕೊಂಡು ಅಸ್ಸಾಂ ಗುವಾಹಟಿಯಲ್ಲಿ ಶಿಂದೆ ಬೀಡು ಬಿಟ್ಟಿದ್ದಾರೆ.
ಈ ನಡುವೆ ಶಿಂದೆ ಗುವಾಹಟಿಯಲ್ಲೇ ಇದ್ದುಕೊಂಡು ಶಿವಸೇನೆಗೆ ಶಾಕ್ ಮೇಲೆ ಶಾಕ್ ಕೊಡುತ್ತಲೇ ಇದೆ. ಒಬ್ಬೊಬ್ಬರು ಬಂಡಾಯದ ಗುಂಪು ಸೇರಿಕೊಳ್ಳುತ್ತಲೇ ಇದ್ದಾರೆ. ಇದೀಗ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಮಂತ್ ಶಿವಸೇನೆಗೆ ಶಾಕ್ ನೀಡಿದ್ದಾರೆ.