ಹೊಸದಿಗಂತ ವರದಿ, ಮಡಿಕೇರಿ:
ಚಲಿಸುತ್ತಿದ್ದ ಜೀಪ್ ಮೇಲೆ ವಿದ್ಯುತ್ ಕಂಬ ಬಿದ್ದು, ತಂತಿಗಳು ಚಕ್ರಕ್ಕೆ ಸುತ್ತಿಕೊಂಡ ಘಟನೆ ದಕ್ಷಿಣ ಕೊಡಗಿನಲ್ಲಿ ನಡೆದಿದ್ದು, ಅದೃಷ್ಟವಶಾತ್ ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಪೊನ್ನಂಪೇಟೆ ತಾಲೂಕಿನ ತೂಚಮಕೇರಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮರ ಬಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಕಂಬ ತುಂಡಾಗಿ ಜೀವನ್ ಎಂಬವರು ಚಾಲಿಸುತ್ತಿದ್ದ ಜೀಪ್ ಮೇಲೆ ಬಿದ್ದಿದೆ. ಆದರೆ ಆ ವೇಳೆಗಾಗಲೇ ವಿದ್ಯುತ್ ಪ್ರವಹಿಸುವುದು ಸ್ಥಗಿತಗೊಂಡಿದ್ದರಿಂದ ನಡೆಯಲಿದ್ದ ಭಾರೀ ಅನಾಹುತ ತಪ್ಪಿದೆ.
ಆದರೆ ವಿದ್ಯುತ್ ತಂತಿಗಳು ಚಕ್ರಕ್ಕೆ ಸುತ್ತಿಕೊಂಡ ಪರಿಣಾಮದ ಅದನ್ನು ತೆಗೆಯಲು ಹರಸಾಹಸ ಪಡಬೇಕಾಯಿತು.