Saturday, December 9, 2023

Latest Posts

ಬೆಳೆಗೆ ನೀರು ಹರಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ರೈತ ಸಾವು!

ಹೊಸದಿಗಂತ ವರದಿ ವಿಜಯಪುರ:

ಹೊಲದಲ್ಲಿ ಬೆಳೆಗೆ ನೀರು ಹರಿಸುವ ವೇಳೆ ವಿದ್ಯುತ್ ತಗುಲಿ ರೈತನೊಬ್ಬ ಸಾವಿಗೀಡಾದ ದಾರುಣ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಆಹೇರಿ ಗ್ರಾಮದಲ್ಲಿ ನಡೆದಿದೆ.

ಗಂಗಾಧರ ಅಪ್ಪಾಸಾಹೇಬ ಪಿರಶೆಟ್ಟಿ (30) ಮೃತಪಟ್ಟ ರೈತ.

ಗಂಗಾಧರ ಪಿರಶೆಟ್ಟಿ ಎಂಬುವರು ಬೆಳೆಗೆ ನೀರು ಹರಿಸಲು ವಿದ್ಯುತ್ ಮೋಟಾರ್ ಆನ್ ಮಾಡಲು ಹೋದ ಸಂದರ್ಭ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಅಸುನೀಗಿದ್ದಾರೆ.

ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!