ಕೈಲಾಸ ಶಿಖರ ದರುಶನ ಪಡೆದ ಪ್ರಧಾನಿ ಮೋದಿ, ಪಾರ್ವತಿ ಕುಂಡದಲ್ಲಿ ವಿಶೇಷ ಪೂಜೆ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿ ಅವರು ದೇವಭೂಮಿ ಉತ್ತರಾಖಂಡಕ್ಕೆ ಭೇಟಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ, ಗುರುವಾರ (ಅಕ್ಟೋಬರ್ 12) ಪಿಥೋರಘಡ್ ಜಿಲ್ಲೆಯ ಆದಿ ಕೈಲಾಸ ಶಿಖರ ದರುಶನ ಪಡೆದ ಪ್ರಧಾನಿ ಮೋದಿ, ಪಾರ್ವತಿ ಕುಂಡದಲ್ಲಿ ಶಿವನಿಗೆ ಹಾರತಿ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.

ಪೇಟ ಧರಿಸಿ ಸ್ಥಳೀಯ ಸಾಂಪ್ರದಾಯಿಕ ಧಿರಿಸಿನಲ್ಲಿ ಪ್ರಧಾನಿ ಮೋದಿ ಮಿಂಚಿದರು. ಈ ಭೇಟಿಯ ಭಾಗವಾಗಿ ಗುಂಜಿಯ ಗಡಿ ಗ್ರಾಮವಾದ ಜಾಗೇಶ್ವರಧಾಮಕ್ಕೆ ಭೇಟಿ ಕೊಟ್ಟು ಸ್ಥಳೀಯರೊಂದಿಗೆ ಸೌಹಾರ್ದಯುತವಾಗಿ ಮಾತನಾಡಿದರು. ಮಕ್ಕಳು, ಮಹಿಳೆಯರು ನಮಸ್ಕರಿಸುತ್ತಿರುವಾಗ ಮೋದಿ ಕೂಡ ನಸುನಗುತ್ತಾ ಅವರ ಕೈ ಹಿಡಿದು ಆತ್ಮೀಯವಾಗಿ ಮಾತನಾಡಿದರು.

ಉತ್ತರಾಖಂಡ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಪಿಥೋರಗಢ ಜಿಲ್ಲೆಯಲ್ಲಿ 4,200 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಆದಿ ಕೈಲಾಸ ದರುಶನದ ಬಳಿಕ ಮೋದಿ ಅಲ್ಮೋರಾದ ಜಾಗೇಶ್ವರ ಧಾಮಕ್ಕೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!