ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ದೇವಭೂಮಿ ಉತ್ತರಾಖಂಡಕ್ಕೆ ಭೇಟಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ, ಗುರುವಾರ (ಅಕ್ಟೋಬರ್ 12) ಪಿಥೋರಘಡ್ ಜಿಲ್ಲೆಯ ಆದಿ ಕೈಲಾಸ ಶಿಖರ ದರುಶನ ಪಡೆದ ಪ್ರಧಾನಿ ಮೋದಿ, ಪಾರ್ವತಿ ಕುಂಡದಲ್ಲಿ ಶಿವನಿಗೆ ಹಾರತಿ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಪೇಟ ಧರಿಸಿ ಸ್ಥಳೀಯ ಸಾಂಪ್ರದಾಯಿಕ ಧಿರಿಸಿನಲ್ಲಿ ಪ್ರಧಾನಿ ಮೋದಿ ಮಿಂಚಿದರು. ಈ ಭೇಟಿಯ ಭಾಗವಾಗಿ ಗುಂಜಿಯ ಗಡಿ ಗ್ರಾಮವಾದ ಜಾಗೇಶ್ವರಧಾಮಕ್ಕೆ ಭೇಟಿ ಕೊಟ್ಟು ಸ್ಥಳೀಯರೊಂದಿಗೆ ಸೌಹಾರ್ದಯುತವಾಗಿ ಮಾತನಾಡಿದರು. ಮಕ್ಕಳು, ಮಹಿಳೆಯರು ನಮಸ್ಕರಿಸುತ್ತಿರುವಾಗ ಮೋದಿ ಕೂಡ ನಸುನಗುತ್ತಾ ಅವರ ಕೈ ಹಿಡಿದು ಆತ್ಮೀಯವಾಗಿ ಮಾತನಾಡಿದರು.
#WATCH | Uttarakhand: Prime Minister Narendra Modi interacts with the locals in Gunji village. pic.twitter.com/UhTfcTehkX
— ANI (@ANI) October 12, 2023
ಉತ್ತರಾಖಂಡ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಪಿಥೋರಗಢ ಜಿಲ್ಲೆಯಲ್ಲಿ 4,200 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಆದಿ ಕೈಲಾಸ ದರುಶನದ ಬಳಿಕ ಮೋದಿ ಅಲ್ಮೋರಾದ ಜಾಗೇಶ್ವರ ಧಾಮಕ್ಕೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.