ಹೊಸದಿಗಂತ, ಕಲಬುರಗಿ:
ಬಿಜೆಪಿ ಪಕ್ಷದ ನಾಯಕರುಗಳ ಮೆದುಳಿಗೆ ಹಾಗೂ ನಾಲಿಗೆಗೆ ಯಾವುದೇ ರೀತಿಯ ಕನೆಕ್ಷನ್ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಹೊಟ್ಟೆಯಲ್ಲಿ ಪ್ರಿಯಾಂಕ್ ಖರ್ಗೆ ಎಂಬ ಕೆಟ್ಟು ಹುಳ ಹುಟ್ಟಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ನಾಯಕ ಈಶ್ವರಪ್ಪ ಅವರ ಸಂಸ್ಕೃತಿ ಬಹಳ ಚೆನ್ನಾಗಿ ಎದ್ದು ತೋರಿಸುತ್ತಿದೆ. ಏನಾದರೂ ಬಾಯಿ ಬಡೆದುಕೊಳ್ಳಲಿ, ಎಲ್ಲಾದರೂ ಬಟ್ಟೆ ಹರೆದುಕೊಳ್ಳಲಿ ನನಗೇನು ಆಗೋದಿದೆ ಎಂದು ಹೇಳಿದರು.
ನಾನು ಕೆಟ್ಟ ಹುಳವೋ ಅಥವಾ ಒಳ್ಳೆಯ ಹುಳವೋ ನಿಮಗೇನು ಆಗಬೇಕಾಗಿದೆ. ನಮ್ಮ ತಂದೆ ತಾಯಿ ನನಗೆ ಸಂಭಾಳಿಸಿಕೊಂಡು ಹೋಗುತ್ತಿದ್ದಾರೆ. ನನ್ನ ಕ್ಷೇತ್ರದ ಜನರು ಆಶೀರ್ವಾದ ಮಾಡಿದ್ದಾರೆ ಎಂದ ಅವರು, ಬಿಜೆಪಿ ಪಕ್ಷದವರು ನಿಮಗ್ಯಾಕೆ ಆಶೀರ್ವಾದ ಮಾಡುತ್ತಿಲ್ಲ ಎಂದು ತಿವಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ ಹಾಗೆ, ಬಿಜೆಪಿಯವರಿಗೆ ಮೆದುಳಿಗೆ ಹಾಗೂ ನಾಲಿಗೆಗೆ ಕನೆಕ್ಷನ್ ಇಲ್ಲ. ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟು ನಿಮಗೆ ನೀವು ಅಂತ ಮಾತನಾಡುತ್ತಿದ್ದೇನೆ. ಬೇರೆ ಭಾಷೆಯಲ್ಲಿ ಅರ್ಥ ಆಗುತ್ತೆ ಅಂದ್ರೆ ಮರಿಬೇಡಿ ನನ್ನ ಮೈಯೆಲ್ಲಿ ಅಂಬೇಡ್ಕರ್ ಅವರ ರಕ್ತ ಹರಿಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಸವರಾಜ ಬೊಮ್ಮಾಯಿ ಮೂಲ ಯಾವುದು. ಅವರಿಗೆ ನೀವೇ ತಾನೇ ಸಿಎಂ ಮಾಡಿರುವುದು. ನಿಮ್ಮದೆಲ್ಲಿದೆ ಮೂಲ. 17 ರಿಂದ 18 ಜನ ಬಂದು ಬಿಜೆಪಿಯನ್ನು ಎಲ್ಲಾ ರೀತಿಯಲ್ಲೂ ಹಾಳು ಮಾಡಿದಿರಲ್ಲ ಎಂದು ಹೇಳಿದರು.