ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ನನಸಾಗುತ್ತಿರುವ ಕೋಟ್ಯಾಂತರ ಮನಸ್ಸುಗಳ ಕನಸ್ಸಿಗೆ ಥೈಲ್ಯಾಂಡ್ ಇನ್ನಷ್ಟು ಖುಷಿ ನೀಡಿದೆ.
ಪ್ರಭು ಶ್ರೀರಾಮಚಂದ್ರನ ಮಂದಿರಕ್ಕೆ ಈ ಪುಟ್ಟ ರಾಷ್ಟ್ರ ಬರೋಬ್ಬರಿ ಮೂರೂವರೆ ಸಾವಿರ ಕಿಲೋ ಮೀಟರ್ ದೂರದಿಂದ ತನ್ನ ನೆಲದ ಮಣ್ಣು ಕಳುಹಿಸಿಕೊಡುತ್ತಿದೆ.
ಅಂದಹಾಗೆ ಈ ರಾಷ್ಟ್ರ ಹಾಗೂ ಅಯೋಧ್ಯೆ ನಡುವಿನ ಸಂಬಂಧ ಹೊಸದಲ್ಲ. ಈ ಹಿಂದೆ ರಾಮ ಮಂದಿರಕ್ಕಾಗಿ ಥೈಲ್ಯಾಂಡ್ ತನ್ನ ಊರಿನಿಂದ ವಿಶೇಷ ನೀರನ್ನು ಕಳುಹಿಸಿಕೊಟ್ಟಿತ್ತು.
ಭಾರತ ಹಾಗೂ ಥೈಲ್ಯಾಂಡ್ ನಡುವೆ ಬಲವಾದ ಸಾಂಸ್ಕೃತಿಕ, ಐತಿಹಾಸಿಕ ಬಾಂಧವ್ಯವಿದೆ. ಥೈಲ್ಯಾಂಡ್ನ ಹಲವು ರಾಜರು ಶ್ರೀರಾಮನ ವಂಶಸ್ಥರ ಭಾಗವಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ.
ಇನ್ನೂ ವಿಶೇಷವೆಂದರೆ ಥೈಲ್ಯಾಂಡ್ನ ಪ್ರತೀ ರಾಜನ ಹೆಸರಿನಲ್ಲೂ ಪ್ರಭು ಶ್ರೀರಾಮನ ಬಿರುದು ಇದೆ. ಇದೀಗ ಭಾರತದ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಥೈಲ್ಯಾಂಡ್ ಇನ್ನಷ್ಟು ಬಲಗೊಳಿಸುತ್ತಿದೆ ಜೊತೆಗೆ ಅಯೋಧ್ಯಾ ಶ್ರೀರಾಮ ಮಂದಿರದ ನಿರ್ಮಾಣದಲ್ಲಿ ಈ ಮೂಲಕ ತಾನೂ ಕೈಜೋಡಿಸುತ್ತಿದೆ.