ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದು ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಸಿಕ್ಕಿದ್ದರೂ ಕೂಡ ಇನ್ನೂ ಸರ್ಕಾರ ರಚಿಸಲಾಗಿಲ್ಲ. ಸಿಎಂ ಕುರ್ಚಿಗಾಗಿ ಒಳಜಗಳ ಶುರುವಾಗಿದ್ದು, ಡಿಕೆಶಿ-ಸಿದ್ದರಾಮಯ್ಯ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಜನರ ಕಾಳಜಿ ಮೊದಲು ಮುಖ್ಯ ಎಂಬ ಮಾತನ್ನಾಡಿದ್ದಾರೆ.
ʻಬಹುಮತ ಪಡೆದರೂ ಕಾಂಗ್ರೆಸ್ ಇನ್ನೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಇದು ಪಕ್ಷದ ಆಂತರಿಕ ಪರಿಸ್ಥಿತಿಯನ್ನು ತೋರಿಸುತ್ತದೆ. ಇಲ್ಲಿ ರಾಜಕೀಯಕ್ಕಿಂತ ಜನರ ಆಶೋತ್ತರಗಳು ಮುಖ್ಯ. ಕಾಂಗ್ರೆಸ್ ಆದಷ್ಟು ಬೇಗ ಸಿಎಂ ಆಯ್ಕೆ ಮಾಡಬೇಕುʼ ಎಂದು ಬೆಂಗಳೂರಿನಲ್ಲಿ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.