ಹೊಸದಿಗಂತ ವರದಿ,ವಿಜಯಪುರ:
ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಇಲ್ಲಿನ ಯಲ್ಲಾಲಿಂಗ ಹಣಮಂತ ತಳವಾರ (30) ಆತ್ಮಹತ್ಯೆಗೆ ಶರಣಾಗಿರುವ ರೈತ.
ಕೆವಿಜಿ ಬ್ಯಾಂಕ್, ಪಿಕೆಪಿಎಸ್ನಲ್ಲಿ 6 ಲಕ್ಷ ಸೇರಿದಂತೆ ಕೈಗಡ ಸಾಲ ಮಾಡಿಕೊಂಡಿದ್ದ, ಹೊಲದಲ್ಲಿ ಬೆಳೆ ಬರದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ