ಭಾರತದ ಟಾಪ್‌ ಫ್ಯಾಷನ್‌ ಡಿಸೈನರ್‌ ಪ್ರತ್ಯುಷಾ ಗರಿಮೆಲ್ಲ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಖ್ಯಾತ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಂಜಾರಾ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತ್ಯೂಷಾ ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದರು. ಲಿವಿಂಗ್ ರೂಮಿನಲ್ಲಿ ಕಾರ್ಬನ್ ಮಾನಾಕ್ಸೈಡ್ ಬಾಟಲಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾರ್ಬನ್ ಮಾನಾಕ್ಸೈಡ್ ಅನಿಲವನ್ನು ಉಸಿರಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಕರಣ ದಾಖಿಲಿಸಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತನಿಖೆ ಮೇರೆಗೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿಯಬೇಕಿದೆ.

ನಿವೃತ್ತ ಐಆರ್‌ಎಸ್ ಅಧಿಕಾರಿ ಕೃಷ್ಣರಾವ್ ಅವರ ಪುತ್ರಿಯಾದ ಪ್ರತ್ಯೂಷಾ ದೇಶದ ಟಾಪ್ 30 ಫ್ಯಾಷನ್ ಡಿಸೈನರ್‌ಗಳಲ್ಲಿ ಒಬ್ಬರು. ಬಾಲಿವುಡ್ ಮತ್ತು ಟಾಲಿವುಡ್‌ನ ಪ್ರಸಿದ್ಧ ನಾಯಕಿಯರಿಗೆ ಪ್ರತ್ಯೂಷಾ ಡ್ರೆಸ್ ಡಿಸೈನ್‌ ಮಾಡಿದ್ದಾರೆ.

ಸೂಸೈಡ್‌ ನೋಟ್‌ ಪತ್ತೆ

ಪ್ರತ್ಯೂಷಾ ಆತ್ಮಹತ್ಯೆಗೂ ಮುನ್ನ ಡೆತ್‌ ನೀಟ್ ಬರೆದಿದ್ದಾಳೆ. ಹೆತ್ತವರಿಗೆ ನಾನು ಹೊರೆಯಾಗಲು ಬಯಸುವುದಿಲ್ಲ, ತಾನು ಬಯಸಿದ ಜೀವನ ಇದಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.

ನಿನ್ನೆ ರಾತ್ರಿ ಜೂಬ್ಲಿ ಹಿಲ್ಸ್‌ನಲ್ಲಿರುವ ತನ್ನ ಮನೆಯಿಂದ ಬೂಟಿಕ್‌ಗೆ ಬಂದಿದ್ದ ಪ್ರತ್ಯೂಷಾ, ಒಳಗೆ ಹೋಗುವ ಮೊದಲು ಡಿಸ್ಟರ್ಬ್‌ ಮಾಡದಂತೆ ವಾಚ್‌ಮೆನ್‌ಗೆ ಹೇಳಿದ್ದಳಂತೆ. ಹೆಚ್ಚು ಸಮಯವಾದರೂ ಹೊರಗೆ ಬಾರದೇ ಇದ್ದದ್ದಕ್ಕೆ ವಾಚ್‌ಮನ್‌ ಒಳ ಹೋಗಿ ನೋಡುವ ವೇಳೆಗೆ ಪ್ರತ್ಯುಷಾ ಕೆಳಗೆ ಬಿದ್ದಿದ್ದರಂತೆ. ಕೂಡಲೇ ಸೆಕ್ಯುರಿಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕಾರ್ಬನ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಇನ್ಹಲೇಷನ್ ನಿಂದಾಗಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!