ಚಾರ್‌ಧಾಮ್‌ ಯಾತ್ರೆ| ಇದುವರೆಗೂ 19 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ

 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ವರ್ಷ ಮೇ 3 ರಂದು ಚಾರ್‌ಧಾಮ್‌ ಯಾತ್ರೆ ಪ್ರಾರಂಭವಾದಾಗಿನಿಂದ ಇಲ್ಲಿವರೆಗೂ ಬರೋಬ್ಬರಿ 19 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿರುವುದಾಗಿ ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ಭಾನುವಾರ ತಿಳಿಸಿದೆ. ಜೂನ್ 11ರ ಸಂಜೆಯವರೆಗೆ ಉತ್ತರಾಖಂಡ್ ಚಾರ್‌ಧಾಮ್ ತಲುಪಿದ ಒಟ್ಟು ಯಾತ್ರಾರ್ಥಿಗಳ ಸಂಖ್ಯೆ 19,04,253 ಮಂದಿ. ಮೇ 8 ರಿಂದ ಜೂನ್ 11ರವರೆಗೆ 6,57,547 ಯಾತ್ರಾರ್ಥಿಗಳು ಬದರಿನಾಥ, ಮೇ 6 ರಿಂದ ಜೂನ್ 11ರವರೆಗೆ 6,33,548 ಯಾತ್ರಿಕರು ಕೇದಾರನಾಥ ಧಾಮಕ್ಕೆ ಭೇಟಿ ನೀಡಿದ್ದಾರೆ.

ಒಂದು ದಿನಕ್ಕೆ 16,000 ಭಕ್ತರು ಬದರಿನಾಥಕ್ಕೆ ಮತ್ತು 13,000 ಜನರು ಕೇದಾರನಾಥ ಧಾಮದಲ್ಲಿ ದೇವರ ದರ್ಶನವನ್ನು ಪಡೆಯುತ್ತಿದ್ದಾರೆ. ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಭೇಟಿ ನೀಡುವ ಸಂಖ್ಯೆ ದಿನಕ್ಕೆ 13ಸಾವಿರಕ್ಕೆ ಏರಿಕೆಯಾಗಿದೆ.

ಗಂಗೋತ್ರಿ-ಯಮುನೋತ್ರಿ ಧಾಮದ ಬಾಗಿಲುಗಳನ್ನು ಮೇ 3 ರಂದು ತೆರೆಯಲಾಯಿತು, ಕೇದಾರನಾಥ ಮತ್ತು ಬದರಿನಾಥದ ಪೋರ್ಟಲ್‌ಗಳು ಮೇ 6 ಮತ್ತು ಮೇ 8 ರಂದು ತೆರೆಯಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!