ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕೋವಿಡ್ನ ಕಣ್ಣಮುಚ್ಚಾಲೆ ಮುಂದುವರಿದಿರುವ ಬೆನ್ನಿಗೇ ಚಾಮರಾಜನಗರ ಜಿಲ್ಲೆಯಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಜ್ವರ, ಶೀತ, ಕೆಮ್ಮು ಹೊಸ ಆತಂಕ ಹುಟ್ಟುಹಾಕಿದೆ.
ಇಲ್ಲಿನ ಯಳಂದೂರಿನ ಬಳೆ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ ಕಾರಣಕ್ಕಾಗಿ ಹತ್ತಕ್ಕೂ ಅಧಿಕ ಮಕ್ಕಳು ತರಗತಿಗೆ ಹಾಜರಾಗಿಲ್ಲ. ಕಳೆದ ಮೂರು ದಿನಗಳಿಂದ ಇವರು ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಶಾಲಾ ಸಿಬ್ಬಂದಿಗಳು ಮಕ್ಕಳ ಮನೆಗೆ ತೆರಳಿದಾಗ ಅವರು ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಿರುವುದು ಗೊತ್ತಾಗಿದೆ.
ಈ ಮಕ್ಕಳ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದ್ದು, ಇವರಿಗೆ ಸೂಕ್ತ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.