September 11, 2026
Friday, September 11, 2026
spot_img

ನೆತ್ತಿ ಸುಡುವ ಬಿಸಲ ಬೇಗೆ ಲೆಕ್ಕಿಸದೆ ಮಾರ್ಜಾಲ ರಕ್ಷಣೆಗೆ ಬಾವಿಗಿಳಿದ ಅಗ್ನಿ ಶಾಮಕ ಪಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಕಸ್ಮಿಕವಾಗಿ ಆಳದ ಬಾವಿಗೆ ಬಿದ್ದಿದ್ದ ಬೆಕ್ಕೊಂದನ್ನು ಮಂಗಳೂರಿನ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಸರಸ್ವತಿ ನಿಲಯ ಮಣ್ಣಗುಡ್ಡದಲ್ಲಿ ಆಕಸ್ಮಿಕವಾಗಿ ಬೆಕ್ಕು ಬಾವಿಗೆ ಬಿದ್ದು ಒದ್ದಾಡುತ್ತಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಜೀವದ ಹಂಗು ತೊರೆದು ಜೀವವನ್ನು ರಕ್ಷಿಸಿದ್ದಾರೆ.

ಸತತ ಒಂದು ಗಂಟೆಯ ಪರಿಶ್ರಮದಿಂದ ಅಗ್ನಿಶಾಮಕದ ದಳದ ಸಿಬ್ಬಂದಿ ಬೆಕ್ಕನ್ನು ಉಳಿಸಿದ್ದಾರೆ. ಹಗ್ಗದ ಸಹಾಯದಿಂದ ಸಿಬ್ಬಂದಿ ಬಾವಿಯ ಆಳಕ್ಕೆ ಇಳಿದು ನಂತರ ಬೆಕ್ಕನ್ನು ಮೇಲೆ ಎತ್ತಿಕೊಂಡು ಬಂದಿದ್ದಾರೆ. ಬೆಕ್ಕನ್ನು ಸುರಕ್ಷಿತವಾಗಿ ತಂದ ಸಿಬ್ಬಂದಿ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ಮನುಷ್ಯರು, ಪ್ರಾಣಿಗಳು ಎನ್ನದೇ ಎಲ್ಲರನ್ನೂ, ಎಲ್ಲವನ್ನೂ ʼಜೀವʼ ಎಂದು ಪರಿಗಣಿಸುವ ಅಗ್ನಿಶಾಮಕ ಸಿಬ್ಬಂದಿ ಕೆಲಸಕ್ಕೆ ನಮ್ಮದೊಂದು ಸಲಾಂ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !