ಹೊಸದಿಗಂತ ಡಿಜಿಟಲ್ ಡೆಸ್ಕ್
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಇತರರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದಾಗಿ ರಾವಲ್ಪಿಂಡಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್ ಡೇರಾ ಇಸ್ಮಾಯಿಲ್ ಖಾನ್ನಿಂದ ಬಾನಿ ಗಾಲಾಗೆ ತೆರಳುತ್ತಿತ್ತು, ಅಲ್ಲಿ ಇಮ್ರಾನ್ ಖಾನ್ ಪ್ರವಾಹ ಪೀಡಿತರಿಗೆ ಹಣಕಾಸಿನ ನೆರವು ವಿತರಿಸುವ ಕಾರ್ಯಕ್ರಮವಿತ್ತು.
ڈیرہ اسماعیل خان سے واپسی پر ہیلی کاپٹر کی اڈیالہ کے نواحی گاؤں کے قریب لینڈنگ
عمران خان مقامی افراد میں گھُل مل گئے، مقامی افراد سے دلچسپ گفتگو۔ pic.twitter.com/7XSjkx7Z9o
— PTI (@PTIofficial) October 8, 2022
ಅಡಿಯಾಲಾ ಟೌನ್ನ ಹಳ್ಳಿಯೊಂದರ ಬಳಿ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿದ ಬಳಿಕ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಮುಖ್ಯಸ್ಥರು ರಸ್ತೆಯ ಮೂಲಕ ತಮ್ಮ ನಿವಾಸಕ್ಕೆ ತೆರಳಿದರು ಎಂದು ಪಕ್ಷವು ಟ್ವಿಟರ್ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ತಿಂಗಳು ಸಹ ಮಾಜಿ ಪ್ರಧಾನಿ ಇಮ್ರಾನ್ ಇದ್ದ ವಿಮಾನವು ತಾಂತ್ರಿಕ ದೋಷವನ್ನು ಅನುಭವಿಸಿ ತುರ್ತು ಭೂಸ್ಪರ್ಶ ಮಾಡಿತ್ತು.