ಹೊಸದಿಗಂತ ವರದಿ ಶಿವಮೊಗ್ಗ:
ವಿಧಾನಸಭೆ ಚುನಾವಣೆ ನಂತರ ಬಿಜೆಪಿಯಿಂದ ಅನೇಕರು ಪಕ್ಷಕ್ಕೆ ಬರುತ್ತಾರೆ ಎಂದು ಕಾಂಗ್ರೆಸ್ ಹೇಳುತ್ತಿತ್ತು. ಆದರೆ ಈಗ ಇರೋರನ್ನ ಕಾಂಗ್ರೆಸ್ ಉಳಿಸಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್ ಭ್ರಮೆಯಲ್ಲಿತ್ತು. ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಬೆಳವಣಿಗೆ ಕಾಂಗ್ರೆಸ್ ಇಂಟಲಿಜೆನ್ಸಿ ಫೆಲ್ಯೂರ್ ಆಯಿತಾ ಎಂಬ ಶಾಕ್ನಲ್ಲಿದೆ ಎಂದು ಕುಟುಕಿದರು.
ಶೆಟ್ಟರ್ ಆಯಿತು ಇನ್ನು ಯಾರು ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರ ನೀಡಿದ ವಿಜಯೇಂದ್ರ, ಲಕ್ಷ್ಮಣ ಸವದಿ ಕಾಂಗ್ರೆಸ್ ನಲ್ಲಿದ್ದರೂ ಮನಸ್ಸು ಬಿಜೆಪಿಯಲ್ಲಿದೆ. ನಾವು ಯಾರ ಬೆನ್ನು ಬಿದ್ದಿಲ್ಲ. ರಾಷ್ಟ್ರದ ಹಿತದೃಷ್ಠಿಯಿಂದ ಯಾರು ಬಂದರೂ ಸ್ವಾಗತ ಎಂದರು.
ಅಯೋಧ್ಯೆಯಲ್ಲಿ ರಾಮ ಲಲಾನ ಪ್ರತಿಷ್ಠಾಪನೆಗೆ ತೆರಳಿದರೆ ಅಲ್ಪಸಂಖ್ಯಾತರ ಭಾವನೆಗೆ ಧ‘ಕ್ಕೆ ತರುತ್ತದೆ ಎಂದು ಕಾಂಗ್ರೆಸ್ ಯೋಚಿಸಿತ್ತು. ಈ ರೀತಿಯ ಭಾವನೆಯಿಂದಲೇ ಅವರು ಅಕಾರ ಕಳೆದುಕೊಳ್ಳಲು ಕಾರಣವಾಗಬಹುದು ಎಂದರು.