ಬಂತೇ ಬಿಡ್ತು ಗಣೇಶ ಹಬ್ಬ: ಆಕಾಶಕ್ಕೇರಿದ ಹೂವು, ಹಣ್ಣಿನ ಬೆಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡೊಳ್ಳು ಹೊಟ್ಟೆ ಗಣಪನ ಹಬ್ಬ ಬಂದೇ ಬಿಡ್ತು. ದೇಶಾದ್ಯಂತ ಬೀದಿ ಬೀದಿಗಳಲಿ ಡಜೆ ಸೌಂಡ್ಸ್‌, ಕಲರ್‌ ಕಲರ್‌ ಲೈಟುಗಳಿಂದ ಗಣೇಶ ವಿರಾಜಮಾನನಾಗಿರುತ್ತಾನೆ. ನಾಳೆಯೇ ಹಬ್ಬವಾದ್ದರಿಂದ ಹಬ್ಬಕ್ಕೆ ಬೇಕಾದ ಹೂವು-ಹಣ್ಣು ತರಕಾರಿ ವ್ಯಾಪಾರ ಜೋರಾಗೇ ಇದೆ. ಬೆಳ್ಳಂಬೆಳಗ್ಗೆಯೇ ಬೆಂಗಳೂರಿನ ಹಲವು ಮಾರುಕಟ್ಟೆಗಳಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಬೆಲೆ ಎಷ್ಟೇ ಗಗನಕ್ಕೇರಿದರೂ ಯಾವುದೇ ಹೂವು ಹಣ್ಣು ಮಾತ್ರ ಗಣೇಶನಿಗೆ ತಪ್ಪಿಸುವ ಹಾಗೆ ಇಲ್ಲ. ದರ ಎಷ್ಟಾದರೂ ಮಾರುಕಟ್ಟೆಯಲ್ಲಿ ಕೊಳ್ಳುವ ಭರಾಟೆ ಜೋರಾಗಿದೆ.

ಬೆಂಗಳೂರಿನ ಕೆ.ಆರ್‌ ಮಾರುಕಟ್ಟೆಯಲ್ಲಿ ಹೂವು ಹಣ್ಣುಗಳ ಬೆಲೆ ಆಕಾಶ ತಾಕಿದೆ. ಮಲ್ಲಿಗೆ, ಕನಕಾಂಬರ ಹೂವಿನ ದರ ಒಂದು ಸಾವಿರ ರೂಪಾಯಿ ಗಡಿ ದಾಟಿದ್ದು, ಸೇವಂತಿಗೆ, ಗುಲಾಬಿ, ಸುಗಂಧರಾಜ 150ರೂಪಾಯಿಯಿಂದ 350ರೂವರೆಗೆ ಇದೆ. ಇನೂ ಗರಿಕೆ, ಬಿಳಿ ಎಕ್ಕದ ಹೂವು ಹತ್ತು, ಇಪ್ಪತ್ತು ರೂಪಾಯಿ ಮಾರಾಟವಾಗುತ್ತಿದೆ.

ಹಣ್ಣುಗಳ ದರ ನೋಡುವುದಾದರೆ,  ಬಾಳೆಹಣ್ಣು-120 ರಿಂದ 140 ರೂ, ಸೇಬು- 180 ರಿಂದ 250 ರೂ, ಕಿತ್ತಳೆ-70 ರಿಂದ 120ರೂ, ಪೈನಾಪಲ್-‌ 20 ರಿಂದ 70 ರೂ, ದಾಳಿಂಬೆ ಹಣ್ಣು- 50ರಿಂದ 130 ರೂ. ದ್ರಾಕ್ಷಿ- 50 ರಿಂದ 70 ರೂಪಾಯಿವರೆಗೂ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!