ಗ್ಯಾರೇಜ್‌ಗೆ ಬೆಂಕಿ: ಸುಟ್ಟು ಕರಕಲಾದ ಬೈಕ್‌ಗಳು

ಹೊಸದಿಗಂತ ವರದಿ ಯಲ್ಲಾಪುರ :

ಪಟ್ಟಣದ ಕೆ ಬಿ ರಸ್ತೆಯಲ್ಲಿರುವ ಪುನೀತ್ ಗ್ಯಾರೇಜಿಗೆ ಆಕಸ್ಮಿಕ ವಾಗಿ ಬೆಂಕಿ ತಗುಲಿ, ಬೈಕ ಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಮಯೂರು ಕೂದಳೆ ಮಾಲೀಕತ್ವದ ಈ ಅಂಗಡಿಯನ್ನು ರಾಘು ಎಂಬುವರು ಬಾಡಿಗೆ ಆಧಾರದಲ್ಲಿ ಪುನೀತ್ ಗ್ಯಾರೇಜಿ ನಡೆಸುತ್ತಿದ್ದರು. ಅವರಿಗೆ ಲಕ್ಷಾಂತರ ರೂ ಹಾನಿಯಾಗಿದೆ.

ಅದೃಷ್ಟ ವಾಶಾತ ಯಾವದೇ ಪ್ರಾಣಪಾಯ ವಾಗಿಲ್ಲ.ತತಕ್ಷಣ ಅಗ್ನಿಶಾಮಕ ದಳ ದವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಇದರಿಂದಾಗಿ ಬೆಂಕಿಗೆ ಆಹುತಿಯಾದ ಅಂಗಡಿ ಗೆ ಅಂಟಿಕೊಂಡಂತಿರುವ ಅಕ್ಕ ಪಕ್ಕ ಮನೆ,ಅಂಗಡಿ ಗಳಿಗೆ ಬೆಂಕಿ ಹರಡಿ ಹೆಚ್ಚಿನ ಅನಾಹುತ ಆಗುವದು ತಪ್ಪಿಸಿದಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!