ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈತರನ್ನು ಮದುವೆಯಾಗೋಕೆ ಒಪ್ಪಿಕೊಳ್ಳುವ ಹೆಣ್ಣಿಗೆ ಐದು ಲಕ್ಷ ರೂಪಾಯಿ ಕೊಡಿ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸಿಎಂಗೆ ಮನವಿ ಮಾಡಿದ್ದಾರೆ.
ಯಾರನ್ನೂ ಕೇಳಿದರೂ ಡಾಕ್ಟರ್, ಇಂಜಿನಿಯರ್ ಮದುವೆ ಆಗುತ್ತೀವಿ ಎನ್ನುತ್ತಾರೆ. ಹೆಣ್ಣು ಹೆತ್ತ ಪೋಷಕರು ರೈತರಿಗೆ ಹೆಣ್ಣು ಕೊಡೋದಿಲ್ಲ ಎನ್ನುತ್ತಾರೆ. ಹೀಗಾಗಿ ಐದು ಲಕ್ಷ ರೂಪಾಯಿ ಕೊಡಿ ಆಗ ರೈತರಿಗೂ ಮದುವೆಯಾಗುತ್ತದೆ ಎಂದು ನಾಗೇಂದ್ರ ಹೇಳಿದ್ದಾರೆ.
ರಾಜ್ಯದಲ್ಲಿ ಶಾಶ್ವತ ಬರ ಪರಿಹಾರ, ಪಿಡಿಎಸ್ ಮೂಲಕ ರಾಗಿ, ಜೋಳ ಧಾನ್ಯ ನೀಡಬೇಕು ಎಂದು ರೈತ ಮುಖಂಡರು ಹಕ್ಕೊತ್ತಾಯ ಮಾಡಿದ್ದಾರೆ.
ಕೃಷಿಕರು ಬಡವರು ಎನ್ನುವ ಭಾವನೆ ಕೆಲ ಹೆಣ್ಣುಮಕ್ಕಳಲ್ಲಿದೆ. ಕೃಷಿ ಇನ್ನಷ್ಟು ಲಾಭದಾಯಕ ಆಗಬೇಕು ಆಗ ಯಾರೂ ಮದುವೆ ಮಾಡಿಕೊಳ್ಳಲು ನಿರಾಕರಿಸುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.