ರಾಗಿಗುಡ್ಡ ಗಲಭೆ ಕುರಿತು ಸರ್ಕಾರದ ಅಸಡ್ಡೆ: ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ

ಹೊಸದಿಗಂತ ವರದಿ ಶಿವಮೊಗ್ಗ :

ರಾಗಿಗುಡ್ಡ ಗಲಬೆ ಕುರಿತಂತೆ ರಾಜ್ಯ ಸರ್ಕಾರದ ಅಸಡ್ಡೆ ಹೇಳಿಕೆ ಖಂಡಿಸಿ ಹಾಗೂ ಅಮಾಯಕರ ಮೇಲೆ ಪ್ರಕರಣ ದಾಖಲಿಸಿ ಬಂಧಿಸುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಅ.12 ರಂದು ಗುರುವಾರ ನಗರದ ಬಾಲರಾಜ್ ಅರಸ್ ರಸ್ತೆಯ ಮಥುರಾ ಪ್ಯಾರಡೈಸ್ ಬಳಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನಿಜೆಪಿ‌ ಅಧ್ಯಕ್ಷ ಟಿ.ಡಿ.‌ಮೇಘರಾಜ್ ಇಂದು ಪತ್ರಿಕಾಗೋಷ್ಠಿಯಲ್ಲಿ‌ ತಿಳಿಸಿದರು.

ರಾಗಿಗುಡ್ಡದಲ್ಲಿ ಎಲ್ಲರೂ ಸಾಮರಸ್ಯದಿಂದ ಇರುವುದನ್ನು ಸಹಿಸದ ಕೆಲವು ವಿಚ್ಛಿದ್ರಕಾರಕ ಶಕ್ತಿಗಳು ಕೊಳ್ಳಿ ಇಡುವ ಕೆಲಸ ಮಾಡಿವೆ. ಸರ್ಕಾರ ಪ್ರತಿನಿಧಿಸುವ ಸಚಿವರು ಕೂಡ ಹಿಂದುಗಳ ಜೀವ ಹಾಗೂ ಜೀವನಕ್ಕೆ ಬೆಲೆ ಇಲ್ಲ ಎಂಬಂತಹ ಹೇಳಿಕೆಗಳನ್ನು ಮಧು ಬಂಗಾರಪ್ಪ, ಪರಮೇಶ್ವರ್, ರಾಮಲಿಂಗರೆಡ್ಡಿ‌ ನೀಡಿದ್ದಾರೆ ಎಂದರು.
ಈ ಪ್ರತಿಭಟನೆಯಲ್ಲಿ ನಾಯಕರಾದ ಕೆ.ಎಸ್. ಈಶ್ವರಪ್ಪ, ಸಂಸದ‌ರಾಘವೇಂದ್ರ, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!