ಹೊಸದಿಗಂತ, ಕೊಪ್ಪಳ:
ಕ್ರೀಡಾಕೂಟ ನೋಡಲು ಬಂದಿದ್ದ ಗ್ರಾಮ ಪಂಚಾಯತ್ ಸಿಬಂದಿಯೊಬ್ಬ ಕುಸಿದು ಬಿದ್ದು ಮೃತ ಪಟ್ಟಿರುವ ಘಟನೆ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದೆ.
ಆರ್.ಡಿ.ಪಿ.ಆರ್ ಇಲಾಖೆ ಕ್ರೀಡಾಕೂಟದ ಎರಡನೇ ದಿನ ಯಲಬುಲರ್ಗಾ ತಾಲೂಕಿನ ಮುಧೋಳ ಗ್ರಾಪಂ ಕಂಪ್ಯೂಟರ್ ಆಪರೇಟರ್ ವಿನೋದ ಕರಿಸಿದ್ದಪ್ಪ ಮ್ಯಾಗೇರಿ (28) ಮೃತ ಪಟ್ಟಿದ್ದಾರೆ. ಕ್ರೀಡಾಕೂಟವನ್ನು ವೀಕ್ಷಿಸುತ್ತಿದ್ದ ವೇಳೆ ಏಕಾಏಕಿ ಅಸ್ವಸ್ಥಗೊಂಡ ವಿನೋದ್ ಅವರನ್ನು ಸ್ಥಳದಲ್ಲಿದ್ದ ಅಂಬುಲೆನ್ಸ್ ಬಳಿ ಕರೆದೊಯ್ಯುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ