ಹೊಸದಿಗಂತ ಡಿಜಿಟಲ್ ಡೆಸ್ಕ್:
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡಿದೆ.
ಪಂದ್ಯದ ಗೆಲುವಿನ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತನಾಡಿದ್ದು, ಈ ಆಟಗಾರರನ್ನು ಹೊಗಳಿದ್ದಾರೆ. ಸರಣಿ ಗೆದ್ದಿದ್ದು ಸಿಕ್ಕಾಪಟ್ಟೆ ಖುಷಿಯಾಗಿದೆ. ಈ ಪಂದ್ಯ ಸುಲಭದ್ದಾಗಿರಲಿಲ್ಲ. ಕೆ.ಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಜೊತೆಯಾಟ ತುಂಬಾ ಚೆನ್ನಾಗಿತ್ತು. ಬೌಲಿಂಗ್ ಪಡೆಯೂ ಹೊಗಳಿಕೆಗೆ ಅರ್ಹ. ಒತ್ತಡದ ಸಂದರ್ಭದಲ್ಲೂ ಸೂರ್ಯಕುಮಾರ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಸ್ವಲ್ಪ ಸಮಯ ತೆಗೆದುಕೊಂಡು ಅವರಿಂದ ನಾವು ಏನು ನಿರೀಕ್ಷೆ ಮಾಡ್ತಿದ್ದೀವಿ ಅನ್ನೋದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ರಾಹುಲ್ ಆಟ ಕೂಡ ಭರ್ಜರಿಯಾಗಿತ್ತು ಎಂದಿದ್ದಾರೆ.