ಹನುಮಾನ್‌ ಚಾಲೀಸಾ ಪ್ರಕರಣ: ರಾಣಾ ದಂಪತಿಗೆ ಜಾಮೀನು ನೀಡಿದ ಸ್ಪೆಷಲ್‌ ಕೋರ್ಟ್‌

ಮಾತೋಶ್ರಿ ಎದುರಲ್ಲಿ (ಠಾಕ್ರೆ ನಿವಾಸ) ಹನುಮಾನ್‌ ಚಾಲೀಸಾ ಹೇಳೆತ್ತೇವೆಂದು ಹೇಳಿದ ಕಾರಣಕ್ಕೆ ದೇಶದ್ರೋಹ ಸೇರಿದಂತೆ ವಿವಿಧ ಅರೋಪದ ಅಡಿಯಲ್ಲಿ ಬಂಧಿತ ರಾಗಿದ್ದ ಪಕ್ಷೇತರ ಶಾಸಕ ರವಿ ರಾಣಾ ಮತ್ತುಸಂಸದೆಯಾಗಿರುವ ಅವರ ಪತ್ನಿ ನವನೀತ್‌ ರಾಣಾ ಅವರಿಗೆ ಮುಂಬೈ ವಿಶೇಷ ನ್ಯಾಯಾಲಯವು ಜಾಮೀನು ನೀಡಿದೆ.

ಏಪ್ರಿಲ್‌ 23 ರಂದು ರಾಣಾ ದಂಪತಿಗಳನ್ನು ಬಂಧಿಸಿ ದೇಶದ್ರೋಹ, ಶಾಂತಿ ಸುವ್ಯವಸ್ಥೆಗೆ ಭಂಗ ತರುವುದು ಮುಂತಾದ ಆರೋಪಗಳನ್ನು ಹೊರಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಅವರನ್ನು ಮೇ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಪ್ರಸ್ತುತ ಅವರಿಗೆ ಬಾಂಬೆ ವಿಶೇಷ ನ್ಯಾಯಾಲಯವು ಜಾಮೀನು ನೀಡಲು ಸಮ್ಮತಿಸಿದ್ದು 50,000 ರೂ.ಗಳ ಬಾಂಡ್‌ ಶ್ಯೂರಿಟಿಯೊಂದಿಗೆ ಜಾಮೀನು ನೀಡಿದೆ.

ಜಾಂಈನು ನೀಡಿರುವ ವಿಶೇಷ ನ್ಯಾಯಾಧೀಶ ಆರ್.ಎನ್‌. ರೋಕಡೆ “ರಾಣಾ ದಂಪತಿಗಳಿಗೆ ಷರತ್ತುಬದ್ಧ ಜಾಮೀನು ನೀಡಲು ನ್ಯಾಯಾಲಯವು ಒಪ್ಪಿಗೆ ನೀಡಿದ್ದು ಪ್ರಕರಣದ ಕುರಿತಾಗಿಅವರು ಯಾವುದೇ ಮಾಧ್ಯಮ ಹೇಳಿಕೆಯನ್ನು ನೀಡುವಂತಿಲ್ಲ ಮತ್ತು ತನಿಖಾಧಿಕಾರಿಗಳೊಮದಿಗೆ ಸಹಕರಿಸಬೇಕು” ಎಂದು ಹೇಳಿದ್ಧಾರೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!