ಹೊಸದಿಗಂತ ವರದಿ, ಬಾಗಲಕೋಟೆ:
ಪ್ರತಿ ವ್ಯಕ್ತಿಯು ಬದುಕಿನಲ್ಲಿ ಯಶಸ್ಸನ್ನು ಪಡೆಯಲು ಕಠಿಣಶ್ರಮ ಅತ್ಯಗತ್ಯ ಎಂದು ಡಾ. ಸುಧಾ ಮೂರ್ತಿ ತಿಳಿಸಿದರು.
ನಗರದ ತೇಜಸ್ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆನ ಸಂವಾದ ಕಾರ್ಯಕ್ರಮದಲ್ಲಿ ಡಾ. ಸುಧಾ ಮೂರ್ತಿ ಮಾತನಾಡುತ್ತಾ ನಿತ್ಯ ಜೀವನದ ಬದುಕಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸೋಲು ಗೆಲುವುಗಳನ್ನು ಕಾಣುವುದು ಸಾಮಾನ್ಯ ಹಾಗೆಯೇ ಯಶಸ್ಸನ್ನ ಪಡೆಯಲು ಅಗತ್ಯ ಪರಿಶ್ರಮ ಅವಶ್ಯ ಎಂದರಲ್ಲದೆ ತಮ್ಮ ಬದುಕಿನ ಹಲವು ನೈಜ ಸಂಗತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಸುಂದರ ಬದುಕು ಕಟ್ಟಿಕೊಳ್ಳಲು ಪ್ರೇರೇಪಿಸಿದರು.
ವಿದ್ಯಾರ್ಥಿಗಳು ಕೇಳಿದ ಹಲವು ಕೌತುಕ ಕುತೂಹಲ ಪ್ರಶ್ನೆಗಳಿಗೆ ನಗುನಗುತ್ತಲೆ ಪ್ರೇರೇಪಿಸುವ ಉತ್ತರಗಳನ್ನು ಡಾ. ಸುಧಾ ಮೂರ್ತಿ ನೀಡಿದರು.
ಈ ಸಂದರ್ಭ TIEI ಅಧ್ಯಕ್ಷರಾದ ಮಾಧುರಿ ಮುಧೋಳ್, ವಿಧಾನ ಪರಿಷತ್ ಸದಸ್ಯ ಹನುಮಂತ ಆರ್ ನಿರಾಣಿ, ನಿವೃತ್ತ ಐಎಎಸ್ ಅಧಿಕಾರಿಯಾದ ಎಂ ಹೆಚ್ ಡ್ಯಾಬೇರಿ , TIRS ಪ್ರಾಚಾರ್ಯರಾದ ಸಚಿನ್ ಬಾತ್ರಾ, ಎಂ ಆರ್ ಎನ್ ಗ್ರೂಪ್ ಆಫ್ ಮೆಡಿಕಲ್ ಇನ್ಸ್ಟಿಟ್ಯೂಟ್ ನ ಆಡಳಿತ ಅಧಿಕಾರಿ ಆದ ಡಾ/ ಶಿವಕುಮಾರ್ ಗಂಗಲ್ ಹಾಗೂ ತೇಜಸ್ ಶಿಕ್ಷಣ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಜರಿದ್ದರು.