ಸತೀಶ್ ಜಾರಕಿಹೊಳಿಯಿಂದ ಹಿಂದೂಗಳ ಭಾವನೆಗೆ ಧಕ್ಕೆ: ಬಹಿರಂಗ ಕ್ಷಮೆ ಕೇಳುವಂತೆ ನಯನಾ ಗಣೇಶ್ ಆಗ್ರಹ

ಹೊಸದಿಗಂತ ವರದಿ, ಉಡುಪಿ:

ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುವ ಹೇಳಿಕೆಯನ್ನು ನೀಡಿರುವ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಬಹಿರಂಗವಾಗಿ ಕ್ಷಮೆ ಕೇಳುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಆಗ್ರಹಿಸಿದ್ದಾರೆ.

ಹಿಂದುತ್ವ ಈ ದೇಶದ ಅಸ್ಮಿತತೆ,ಜೀವನ ಪದ್ದತಿಯಾಗಿದೆ.ಜಗತ್ತಿನ ಎಲ್ಲರಿಗೂ ಸುಖ,ಸುಭಿಕ್ಷೆಯನ್ನು ಬಯಸುವ ಉದಾತ್ತ ಸಂಸ್ಕೃತಿಯಾಗಿದೆ.ಆದರೆ ಜಾತ್ಯತೀತ ಹೆಸರಿನಲ್ಲಿ ತಮ್ಮ ವೋಟ್ ಬ್ಯಾಂಕ್ ರಾಜಕಾರಣ ಭಧ್ರಪಡಿಸಲು ಹಿಂದೂ ವಿಚಾರಧಾರೆಗೆ,ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ಕಾಂಗ್ರೆಸ್ ಪಕ್ಷದ ನಾಯಕರು ಮಾಡುತ್ತಿದ್ದು ಖಂಡನೀಯವಾಗಿದೆ.

ಇತರೆ ಮತ,ಸಂಪ್ರದಾಯಗಳನ್ನು ಈ ರೀತಿ ಪ್ರಶ್ನೆ ಮಾಡುವ ತಾಕತ್ ಪ್ರದರ್ಶಿಸಲಿ, ಸನಾತನ ಸಂಸ್ಕೃತಿಯ ಭಾವನೆಗಳಿಗೆ ಘಾಸಿ ಮಾಡುವ ಕೆಟ್ಟ ಪ್ರವೃತ್ತಿ ಕಾಂಗ್ರೆಸ್ ಪಕ್ಷಕ್ಕೆ ಅಭ್ಯಾಸವಾಗಿ ಬಿಟ್ಟಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಜನ ಕಾಂಗ್ರೆಸ್ ಪಕ್ಷದ ನಾಯಕರಿಗೆ ತಕ್ಕ ಉತ್ತರವನ್ನು ನೀಡಲಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!