ಹೊಸದಿಗಂತ ವರದಿ ಕುಪ್ಪೆಪದವು:
ಮಂಗಳೂರು- ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿಯ ಗುರುಪುರ ಬೆಳ್ಳಿಬೆಟ್ಟು ಕ್ರಾಸ್ ಬಳಿ ಇಂದು ಬೆಳಿಗ್ಗೆ ಲಾರಿ ಮತ್ತು ಈಚರ್ ವಾಹನದ ನಡುವೆ ನಡೆದ ಭೀಕರ ಅಪಘಾತದಲ್ಲಿ ಓರ್ವ ಚಾಲಕ ಸ್ಥಳದಲ್ಲಿಯೇ ಮೃತ ಪಟ್ಟು ಇನ್ನೊರ್ವ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಮಂಗಳೂರಿನತ್ತ ಸಾಗುತ್ತಿದ್ದ ಬ್ರಹತ್ ಲಾರಿಯೊಂದು ಎದುರುಗಡೆಯಿಂದ ಬರುತ್ತಿದ್ದ ಈಚರ್ ವಾಹನಕ್ಕೆ ಗುದ್ದಿದ್ದು,ಎರಡೂ ವಾಹನಗಳು ಸಂಪೂರ್ಣ ಜಖ0ಗೊಂಡಿವೆ.ವಾಹನಗಳ ಒಳಗಡೆ ಸಿಲುಕಿದ್ದ ಚಾಲಕರನ್ನು ಹರಸಹಾಸ ಪಟ್ಟು ಹೊರತೆಗೆಯಾಲಾಗಿದೆ.
ಅಪಘಾತದಲ್ಲಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇನ್ನೊರ್ವನ ಸ್ಥಿತಿ ಚಿಂತಾಜನಕವಾಗಿದೆ. ವಿವರಗಳು ಇನ್ನಷ್ಟೇ ಲಭಿಸಬೇಕಾಗಿದೆ.