ದಿನಭವಿಷ್ಯ| ಸಂಘರ್ಷಕ್ಕಿಂತ ಸಂಧಾನ ಉತ್ತಮ ದಾರಿ ಎಂಬುದು ಗಮನದಲ್ಲಿರಲಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಉದ್ಯೋಗ, ಖಾಸಗಿ ಬದುಕು ಮತ್ತು ಸಂಬಂಧ ಈ ಮೂರರಲ್ಲೂ ಪೂರಕ ಬೆಳವಣಿಗೆ. ಆರ್ಥಿಕ ಲಾಭ. ಆರೋಗ್ಯ ಸಮಸ್ಯೆ ಪರಿಹಾರ.

ವೃಷಭ
ಎಂದಿಗಿಂತ ಹೆಚ್ಚು ಒತ್ತಡ. ಅದಕ್ಕೆ ಕಾರಣ ಕೌಟುಂಬಿಕ ಸಂಘರ್ಷಗಳು. ಅದು ದಿನವಿಡೀ ನಿಮ್ಮ ಮನಸ್ಸನ್ನು ಕಾಡುತ್ತದೆ. ಮನಶ್ಯಾಂತಿ ದೂರ.

ಮಿಥುನ
ಕೆಲಸದ ಒತ್ತಡ ಹೆಚ್ಚು. ಸಹೋದ್ಯೋಗಿಗಳ ಜತೆ ನಿಮ್ಮ ವರ್ತನೆಯನ್ನು ಬದಲಿಸಿ ಕೊಳ್ಳಿ. ಸಂಘರ್ಷಕ್ಕಿಂತ ಸಂಧಾನ ಉತ್ತಮ, ತಿಳಿಯಿರಿ.

ಕಟಕ
ದಿನದ ಬಹುಪಾಲು ಚಿಂತೆಯಲ್ಲೆ ಕಳೆಯುವಿರಿ. ನಿಮ್ಮ ಭವಿಷ್ಯದ ವಿವಿಧ ಮಜಲುಗಳ ಕುರಿತಂತೆ ಚಿಂತೆ. ಭಾವನಾತ್ಮಕ ತಾಕಲಾಟ.

ಸಿಂಹ
ಆಪ್ತೇಷ್ಟರೊಂದಿಗೆ ಹೆಚ್ಚು ಕಾಲ ಕಳೆಯುವಿರಿ. ಅವರ ಬೇಕುಬೇಡಗಳನ್ನು ಅರಿತುಕೊಳ್ಳಿ. ವ್ಯವಹಾರದಲ್ಲಿ ಸಫಲತೆ, ಧನ ಲಾಭ.

ಕನ್ಯಾ
ಕೆಲಸದಲ್ಲಿ ಯಶಸ್ಸು. ಇತರರಿಂದ ಮೆಚ್ಚುಗೆ ಪಡೆಯುವಿರಿ. ಆರ್ಥಿಕ ಲಾಭ ಉಂಟಾಗಲಿದೆ. ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆ, ಸಾಮರಸ್ಯ.

ತುಲಾ
ದೈನಂದಿನ ಕಾರ್ಯ ವನ್ನು ಸಮಯ ಮಿತಿಯಲ್ಲಿ ಮುಗಿಸಲು ವಿಫಲರಾಗುವಿರಿ. ಹಣವನ್ನು ಅನವಶ್ಯ ವಿಷಯಕ್ಕೆ ಖರ್ಚು ಮಾಡುವಿರಿ.

ವೃಶ್ಚಿಕ
ಕಡಿಮೆ ಶ್ರಮದಿಂದ ಹೆಚ್ಚು ಸಫಲತೆ ಗಳಿಸುವಿರಿ. ಅದಕ್ಕೆ ಗ್ರಹಗತಿ ನಿಮಗೆ ಪೂರಕವಾಗಿರುವುದು ಕಾರಣ. ಆಪ್ತರೊಡನೆ ವಿರಸ ಅಂತ್ಯ.

ಧನು
ಮನಸ್ಸಿನಲ್ಲೇನೋ ಕಸಿವಿಸಿ. ಈ ದಿನವು ನೀವು ಬಯಸಿದಂತೆ ಸಾಗದು. ನಿಮ್ಮ ಇಚ್ಛೆಗೆ ವಿರುದ್ಧವಾದ ಬೆಳವಣಿಗೆ. ಕೌಟುಂಬಿಕ ಕಿರಿಕಿರಿ.

ಮಕರ
ಕೆಲಸದಲ್ಲಿ ತಪ್ಪ ಗಳಾಗಬಹುದು. ತಿದ್ದಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿ. ಹಣಕಾಸು ವಿಚಾರದಲ್ಲಿ ಎಚ್ಚರದಿಂದ ವರ್ತಿಸಿ.

ಕುಂಭ
ಪ್ರೀತಿಯಲ್ಲಿ  ಮಹತ್ವದ ಬೆಳವಣಿಗೆ ಸಂಭವಿಸಬಹುದು. ಎಲ್ಲರ ವಿರೋಧ ಕಟ್ಟಿಕೊಳ್ಳದಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶ.

ಮೀನ
ಮನೆ ಮತ್ತು ಕಚೇರಿಯಲ್ಲಿ ಹೆಚ್ಚು ಒತ್ತಡದ ಕೆಲಸ. ಭಾವನಾತ್ಮಕ ಸಂಘರ್ಷಕ್ಕೆ ಒಳಗಾ ಗುವ ಪ್ರಸಂಗ ಒದಗುವುದು. ಸಹನೆ ಅವಶ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!