ದಿನಭವಿಷ್ಯ| ಸರಿಯಾಗಿ ಯೋಚಿಸಿ ನಡೆದರೆ ಇಂದಿನ ದಿನ ಫಲಪ್ರದವಾದೀತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮ್ಮ ಭಾವನೆಗಳಿಗೆ ಸೂಕ್ತವಾಗಿ ಸ್ಪಂದಿಸುವವರು ಸಿಗುವರು. ಅವರ ಸಂಗದಲ್ಲಿ  ಸಾಂತ್ವನ ಪಡೆಯುವಿರಿ. ಭಿನ್ನಮತ ನಿವಾರಣೆ.

ವೃಷಭ
ಯಾವುದೇ ಕಾರ್ಯ ಆರಂಭಿಸುವ ಮುನ್ನ ನಿಮ್ಮ ನಿಲುವು ಸ್ಪಷ್ಟವಾಗಿರಲಿ. ಅಸ್ಪಷ್ಟ ಧೋರಣೆಯೊಂದಿಗೆ ಹೋಗಬೇಡಿ. ಆಪ್ತರ ಜತೆ ವೈಮನಸ್ಸು.

ಮಿಥುನ
ಇಂದು ಉತ್ತಮ ಮನಸ್ಥಿತಿ ಇರುವುದಿಲ್ಲ. ಹಾಗೆಂದು ಅನಪೇಕ್ಷಿತ ಬೆಳವಣಿಗೆ ಸಂಭವಿಸಿದಾಗ ನಿಮ್ಮ ಭಾವೋದ್ವೇಗ ಪ್ರದರ್ಶಿಸಬೇಡಿ.

ಕಟಕ
ವೃತ್ತಿಯಲ್ಲಿ ಮಹತ್ವದ ಸಾಧನೆ ಮಾಡುವಿರಿ. ಸಾಮಾಜಿಕ ಸ್ಥಾನಮಾನ ಹೆಚ್ಚಳ. ಜತೆಗೇ ನಿಮ್ಮ ವಿರುದ್ಧ ಟೀಕೆ ಕೇಳಿಬಂದೀತು. ಅದಕ್ಕೆ  ಅಂಜದಿರಿ.

ಸಿಂಹ
ಖಾಸಗಿ ಮತ್ತು ವೃತ್ತಿ ಕೆಲಸದಲ್ಲಿ ಹೆಚ್ಚು ಒತ್ತಡ. ಬಿಡುವಿಲ್ಲದ ಕಾರ್ಯ. ಆದರೆ ನಿಮ್ಮ ಉತ್ಸಾಹ ಮಾತ್ರ ಕುಂದುವುದಿಲ್ಲ. ಹುರುಪಿನಿಂದಲೇ ಕಾರ್ಯ ಮಾಡುವಿರಿ.

ಕನ್ಯಾ
ದಿನವಿಡೀ ಉತ್ಸಾಹ. ಯಾವುದೇ ಹಿನ್ನಡೆ ಬಾಧಿಸದು. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು. ಭಿನ್ನಮತ ಕಳೆದು ಸಹಕಾರ ಮೂಡುವುದು.

ತುಲಾ
ಸರಿಯಾಗಿ ಯೋಚಿಸಿ ನಡೆದರೆ ಇಂದಿನ ದಿನ ಫಲಪ್ರದವಾದೀತು. ಇಲ್ಲವಾದರೆ ಗೊಂದಲದ ಪರಿಸ್ಥಿತಿಗೆ ಸಿಲುಕುವಿರಿ. ಖಾಸಗಿ ವಿಚಾರದಲ್ಲಿ ಹಿನ್ನಡೆ ಉಂಟಾದೀತು.

ವೃಶ್ಚಿಕ
ಶಾಂತ ಮನಸ್ಥಿತಿ ಕಾಯ್ದುಕೊಳ್ಳಿ. ಪೂರಕವಲ್ಲದ ಪ್ರಸಂಗ ಉದ್ಭವಿಸಬಹುದು. ಅಸಹನೆಯಿಂದ ರೇಗಬೇಡಿ. ಇತರರ ಸಹಕಾರ ಸಿಗುವುದು.

ಧನು
ಪ್ರಸಕ್ತ ಸಂಬಂಧ ವೊಂದರ ಒಳಿತು ಕೆಡುಕುಗಳನ್ನು ಸರಿಯಾಗಿ ವಿವೇಚಿಸಿರಿ. ಆ ಬಳಿಕ ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಿ. ವಿವೇಕ ಅತಿ ಮುಖ್ಯ.

ಮಕರ
ಜೀವನಕ್ಕೆ ಅಗತ್ಯವಾದ ಬದಲಾವಣೆ ತರಲು ಮೀನಮೇಷ ಎಣಿಸದಿರಿ. ಆದಷ್ಟು ಬೇಗ ಅದನ್ನು ಕಾರ್ಯಗತ ಮಾಡಿರಿ. ಎಲ್ಲ ಒಳಿತಾಗುವುದು.

ಕುಂಭ
ಹಿಂದೆ ನಡೆದ ಪ್ರಸಂಗವು ಈಗ ನಿಮ್ಮ ಮೇಲೆ ಪರಿಣಾಮ ಬೀರುವುದು. ಉತ್ಸಾಹ ಕುಂದಿಸುವುದು. ಹಳೆಯದನ್ನು ಮರೆತು ಬಿಡುವುದು ಲೇಸು.

ಮೀನ
ಸವಾಲುಗಳಿಗೆ ಎದೆಗುಂದಬೇಡಿ. ಅದನ್ನು ದಿಟ್ಟವಾಗಿ ಎದುರಿಸಿ. ಸೂಕ್ತ ಸಹಕಾರ ದೊರಕುವುದು. ಕೌಟುಂಬಿಕ ಶಾಂತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!