ದಿನಭವಿಷ್ಯ| ಈ ರಾಶಿಯವರಿಗೆ ಇಂದು ಹೆಚ್ಚು ಕೆಲಸ, ಹೆಚ್ಚು ಸವಾಲು; ಆದರೆ ದಿನದಂತ್ಯಕ್ಕೆ ಎಲ್ಲವೂ ಸಮಾಧಾನಕರ

ಮೇಷ
ಎಲ್ಲವೂ ಇದ್ದೂ ಸಣ್ಣದೊಂದು ಅತೃಪ್ತಿ ಕಾಡುತ್ತಿರುತ್ತದೆ. ಏನೋ ಕೊರತೆಯ ಭಾವ. ಅದಕ್ಕೆ ನಿಮ್ಮ ಮನೋಭಾವ ಕಾರಣವಾಗಿರುತ್ತದೆ.

ವೃಷಭ
ವೃತ್ತಿಯಲ್ಲಿ  ಅಹಿತಕರ ಬೆಳವಣಿಗೆ. ಆರ್ಥಿಕ ಒತ್ತಡ ಕಾಡುವುದು. ಕೌಟುಂಬಿಕ ಪರಿಸರದಲ್ಲಿ ಸಮಾಧಾನ ಸಿಗುವುದು. ಆಪ್ತರಿಂದ ಒಳ್ಳೆಯ ಸುದ್ದಿ ಸಿಗುವುದು.

ಮಿಥುನ
ನಿಮ್ಮ ಸ್ವಂತ ಹಿತಾಸಕ್ತಿಗೆ ಹೆಚ್ಚು ಗಮನ ಕೊಡಿ. ಇತರರ ವಿಚಾರದಲ್ಲಿ ಅನವಶ್ಯ ಮೂಗು ತೂರಿಸಬೇಡಿ. ಇಂದು ಖರೀದಿ ಹುಮ್ಮಸ್ಸು, ಖರ್ಚು ಹೆಚ್ಚಳ.

ಕಟಕ
ಆತ್ಮೀಯ ಕೌಟುಂಬಿಕ ಪರಿಸರದಲ್ಲಿ ಇಂದು ಕಾಲ ಕಳೆಯುವಿರಿ. ಮುಖ್ಯ ವಿಷಯದಲ್ಲಿ ಭಿನ್ನಮತ ನಿವಾರಣೆ. ಹಿರಿಯ ಸದಸ್ಯರ ಕಿವಿಮಾತು ಆಲಿಸಿ.

ಸಿಂಹ
ಕೆಲವರು ನಿಮಗೆ ಆಮಿಷ ಒಡ್ಡಲು ಪ್ರಯತ್ನಿಸಬಹುದು. ಅದಕ್ಕೆ ಬಲಿಯಾಗದಿರಿ. ಆಪ್ತರ ಕುರಿತಾದ ವದಂತಿಗಳನ್ನು ಕಣ್ಣು ಮುಚ್ಚಿ ನಂಬದಿರಿ.

ಕನ್ಯಾ
ಮನಶ್ಯಾಂತಿ ಕೆಡಿಸುವ ಪ್ರಸಂಗ ಉಂಟಾದೀತು. ಆದರೆ ದೃಢ ನಿಲುವು ತಳೆದರೆ ಅದರಿಂದ ಪಾರಾಗುವಿರಿ. ಇತರರ ಅಧೈರ್ಯದ ಮಾತು ಕೇಳದಿರಿ.

ತುಲಾ
ಸಣ್ಣ ವಿಷಯಗಳು ವಾಗ್ವಾದಕ್ಕೆ ಕಾರಣವಾಗಬಹುದು. ಮಾತಿಗೆ ಮಾತು ಬೆಳೆಸಲು ಹೋಗದಿರಿ. ಜಗಳದಿಂದ ದೂರವಿರುವುದು ಲೇಸು.

ವೃಶ್ಚಿಕ
ವೃತ್ತಿಯಲ್ಲಿ  ಹೆಚ್ಚು ಒತ್ತಡ. ಕೆಲವರ ಅಸಹಕಾರ ಕ್ಷೋಭೆ ಹೆಚ್ಚಿಸುವುದು. ಯಾರೊಡನೆಯೂ ವಾಗ್ವಾದಕ್ಕೆ ಇಳಿಯದಿರಿ. ಕೌಟುಂಬಿಕ ಸಮಾಧಾನ, ಸೌಹಾರ್ದ.

ಧನು
ಹೆಚ್ಚು ಕೆಲಸ, ಹೆಚ್ಚು ಸವಾಲು, ಹೆಚ್ಚು ಒತ್ತಡ. ಆದರೆ ದಿನದಂತ್ಯಕ್ಕೆ ಎಲ್ಲವೂ ಸಮಾಧಾನಕರ. ಆತ್ಮೀಯರ ಸಂಗದಲ್ಲಿ  ಎಲ್ಲ ಒತ್ತಡಗಳನ್ನು ಮರೆಯುವಿರಿ.

ಮಕರ
ಭವಿಷ್ಯದ ಬಗ್ಗೆ ನಿರ್ಧಾರ ತಾಳುವಾಗ ಕೇವಲ ಭಾವನೆಗಳಿಗೆ ದಾಸರಾಗದಿರಿ. ವಿವೇಕ ದಿಂದ ಯೋಚಿಸಿ. ಕಠಿಣ ನಿರ್ಧಾರ  ತಾಳಲು ಹಿಂಜರಿಯದಿರಿ.

ಕುಂಭ
ವೃತ್ತಿಗಿಂತಲೂ ಖಾಸಗಿ ವಿಚಾರಗಳಲ್ಲಿ ಇಂದು ಹೆಚ್ಚು ಗಮನ ಹರಿಸುವಿರಿ. ಕೆಲವು ಬೆಳವಣಿಗೆ ನಿಮ್ಮ ಚಿಂತೆಗೆ ಕಾರಣವಾಗುವುದು. ತಾಳ್ಮೆಯಿಂದ ವರ್ತಿಸಿ.

ಮೀನ
ಪ್ರೀತಿಯ ವಿಚಾರದಲ್ಲಿ ಹೆಚ್ಚು ವ್ಯಸ್ತರಾಗುವಿರಿ. ನಿಮಗೆ ಪೂರಕವಾದ ಬೆಳವಣಿಗೆ ಸಂಭವಿಸುವುದು ಆತ್ಮೀಯರಿಂದ ಬೆಂಬಲ, ಸಹಕಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!