ದಿನಭವಿಷ್ಯ | ಈ ರಾಶಿಯವರಿಗೆ ಬಾಧಿಸುತ್ತಿದ್ದ ಸಂಕಷ್ಟಗಳು ಇಂದು ಪರಿಹಾರ ಕಾಣಲಿವೆ

ಮೇಷ
ಇಂದು ನಿಮ್ಮ ವೈಯಕ್ತಿಕ ವಿಷಯ ಗಳತ್ತ ಪ್ರಮುಖವಾಗಿ ಗಮನ ಹರಿಸುವುದು ಒಳ್ಳೆಯದು. ನಡತೆ ಯಲ್ಲೂ ಬದಲಾವಣೆ ತರಬೇಕಾಗುವುದು.

ವೃಷಭ
ಆಹಾರದ ವಿಷಯ ದಲ್ಲಿ ಜಾಗ್ರತೆ ವಹಿಸಿ. ಆರೋಗ್ಯದತ್ತ ಗಮನಹರಿಸಿ. ಕುಟುಂಬದಲ್ಲಿ ಸಣ್ಣಪುಟ್ಟ ಮನಸ್ತಾಪ ಸಂಭವ. ಸಂಯಮ, ತಾಳ್ಮೆ ಇರಲಿ.

ಮಿಥುನ
ಸಾಹಸದ ಪ್ರವೃತ್ತಿ ನಿಮ್ಮನ್ನು ದುಸ್ಸಾಹಸಕ್ಕೆ ಪ್ರೇರೇಪಿಸಬಹುದು. ಎಚ್ಚರ ವಹಿಸುವುದೊಳ್ಳೆಯದು. ಉದ್ಯೋಗದಲ್ಲಿ ಅಭದ್ರತೆ. ಕೌಟುಂಬಿಕ ಸಹಕಾರ.

ಕಟಕ
ಕೌಟುಂಬಿಕ ಉದ್ವಿಗ್ನತೆ. ಅದನ್ನು ಪರಿಹರಿಸಲು ಸಂಬಂಧಿಸಿದವರೊಡನೆ  ಸೂಕ್ತ ಸಮಾಲೋಚನೆ ನಡೆಸುವುದೇ ಒಳ್ಳೆಯ ದಾರಿ. ದುಡುಕಿನ ವರ್ತನೆ ಸಲ್ಲದು.

ಸಿಂಹ
ನಿಮ್ಮ ದೈನಂದಿನ ಗುರಿ ಈಡೇರಿಕೆಗೆ ಮುಖ್ಯ ಗಮನ ಹರಿಸಿ. ಅದರಿಂದ ಎಲ್ಲವೂ ಸುಸೂತ್ರ. ನಿಮ್ಮ ಸುತ್ತಲಿರುವವರ ಜತೆ ತಿಕ್ಕಾಟ ತಪ್ಪಿಸಿ.

ಕನ್ಯಾ
ವಿವಿಧ ಬಗೆಯ ಚಿಂತೆಗಳು ಏಕಕಾಲದಲ್ಲಿ ದಾಳಿಯಿಡಬಹುದು. ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಂಡು ನಡೆಯುವುದೇ ಅದಕ್ಕೆ ಸೂಕ್ತ ಪರಿಹಾರ.

ತುಲಾ
ಯಾವುದೇ ಕಾರ್ಯ ವನ್ನು ಯೋಜಿಸಿ ನಡೆಸಿ. ಕೌಟುಂಬಿಕವಾಗಿ ಹೆಚ್ಚು ಹೊಣೆಗಾರಿಕೆ. ಇತರರ ಬೇಡಿಕೆ ಈಡೇರಿಸಲು ಹೆಚ್ಚಿನ ಸಮಯ ವಿನಿಯೋಗ.

ವೃಶ್ಚಿಕ
ಉದಾಸೀನತೆಯಿಂದ ಕೆಲಸ ಮಾಡಲು  ಮನಸ್ಸಾಗದು. ಆರ್ಥಿಕ ಪರಿಸ್ಥಿತಿ ತುಸು ಸುಧಾರಿಸಿ ಮನಸ್ಸಿಗೆ ನಿರಾಳತೆ. ಆರೋಗ್ಯದ ಕಾಳಜಿ ಅತ್ಯವಶ್ಯ .

ಧನು
ಪೂರ್ಣ ಗಮನವಿಟ್ಟು ಯಾವುದೇ ಕಾರ್ಯ ಮಾಡಿದರೆ ಯಶಸ್ಸು. ಕೌಟುಂಬಿಕ ಸಂಕಷ್ಟಗಳು ಪರಿಹಾರ ಕಾಣುತ್ತವೆ. ಇಷ್ಟ ದೇವರ ಪ್ರಾರ್ಥನೆ ಯಿಂದ ಒಳಿತು.

ಮಕರ
ಇತರರಿಗೆ ನೆರವು ನೀಡುವುದರಲ್ಲಿ ನೆಮ್ಮದಿ ಕಾಣುವಿರಿ. ಮನಸ್ಸಿಗೆ ನಿರಾಳತೆ ತರುವ ಸುದ್ದಿ. ದೂರದ ಬಂಧುವೊಬ್ಬರು ನೆರವಿಗೆ ಬರುವರು.

ಕುಂಭ
ಇತ್ತೀಚಿನ ನಿಮ್ಮ ಕೆಲವು ನಷ್ಟಗಳನ್ನು ಸರಿದೂಗಿಸುವ ರೀತಿಯಲ್ಲಿ ಲಾಭ ಗಳಿಸುತ್ತೀರಿ. ಸಮೀಪ ಬಂಧುಗಳಿಂದ ತುಸು ನಿಮಗಿಂದು ಕಿರಿಕಿರಿ.

ಮೀನ
ವಿವಿಧ ದಿಕ್ಕು ಗಳಿಂದ ಒತ್ತಡ ಅನುಭವಕ್ಕೆ ಬರುವುದು. ಇದು ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರುವುದು. ಮಾನಸಿಕ ಚಂಚಲತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!