ದಿನಭವಿಷ್ಯ | ನಿಮ್ಮ ಚಿಂತನೆ- ನಿಲುವು ಅಭಿವ್ಯಕ್ತಿಸಲು ಸಕಾಲ, ಭಾವನೆಗಳನ್ನು ಮುಚ್ಚಿಡಬೇಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮೇಷ
ನಿಮ್ಮ ಖಾಸಗಿ ವಿಷಯಕ್ಕೆ ಸಂಬಂಧಿಸಿ ತೀರಾ ಭಾವುಕರಾಗಿ ವರ್ತಿಸುವಿರಿ. ಅನಪೇಕ್ಷಿತ ಪ್ರಸಂಗವು ನಿಮ್ಮನ್ನು ಅಚ್ಚರಿಗೆ ತಳ್ಳಬಹುದು.

ವೃಷಭ
ವೃತ್ತಿ ಮತ್ತು ಸಾಮಾಜಿಕ ಕೆಲಸಗಳಲ್ಲಿ ಇಂದು ಹೆಚ್ಚು ತೊಡಗುವಿರಿ. ಆರೋಗ್ಯವು ತುಸು ಸಮಸ್ಯೆ ಒಡ್ಡೀತು. ಒತ್ತಡದ ಬದುಕಿನಿಂದ ಹೊರಬನ್ನಿ.

ಮಿಥುನ
ಕೆಲವು ವಿಷಯ ಮುಚ್ಚಿಟ್ಟದ್ದಕ್ಕೆ ಆಪ್ತರು ನಿಮ್ಮ ಮೇಲೆ ಕೋಪಿಸಿಕೊಂಡಾರು. ಅವರನ್ನು ಸಮಾಧಾನ ಮಾಡುವುದೇ ನಿಮ್ಮ ಕಾರ್ಯವಾಗುವುದು.

ಕಟಕ
ನಿಮ್ಮಿಂದ ಸಾಧ್ಯವಾಗದ ಆಶ್ವಾಸನೆ ಕೊಡಲು ಹೋಗದಿರಿ. ಇಲ್ಲವಾದರೆ ಕೆಲವರ ವಿಶ್ವಾಸ ಕಳಕೊಳ್ಳುವಿರಿ.  ಆಪ್ತರ ಮನ ನೋಯಿಸಬೇಡಿ.

ಸಿಂಹ
ನಿಮ್ಮ ಚಿಂತನೆ, ನಿಲುವು ಅಭಿವ್ಯಕ್ತಿಸಲು ಸಕಾಲ. ಭಾವನೆಗಳನ್ನು ಮುಚ್ಚಿಟ್ಟು ಕೂರಬೇಡಿ. ಅದನ್ನು ಹೊರಹಾಕಿ. ಪ್ರೀತಿಯ ಭಾವ ಆವರಿಸಬಹುದು.

ಕನ್ಯಾ
ಹಲವಾರು ಸಮಸ್ಯೆ ಏಕಕಾಲದಲ್ಲಿ ದಾಳಿ ಇಡಬಹುದು. ಸ್ಥೈರ್ಯ ಕಳಕೊಳ್ಳದಿರುವುದು ಮುಖ್ಯ. ಅಂತ್ಯದಲ್ಲಿ ಎಲ್ಲವೂ ಸುಗಮವಾಗಿ ಪರಿಹಾರ ಕಾಣುವವು.

ತುಲಾ
ಸಂಕೀರ್ಣ ಸಮಸ್ಯೆ ನಿಮ್ಮನ್ನು ಕಾಡಬಹುದು. ಅದನ್ನು ಬೇಗನೆ ಪರಿಹರಿಸಲು ಯತ್ನಿಸಿ. ಈ ವಿಷಯದಲ್ಲಿ ವಿಳಂಬ ಧೋರಣೆ ಒಳ್ಳೆಯದಲ್ಲ.

ವೃಶ್ಚಿಕ
ಕೆಲವರ ಕಾರ್ಯವು ನಿಮಗೆ ಅಸಮಾಧಾನ ಸೃಷ್ಟಿಸಬಹುದು. ಆದರೆ ಅದರ ವಿರುದ್ಧ ರೋಷ ಕಾರದಿರಿ. ಅದು ಜಗಳಕ್ಕೆ ಕಾರಣವಾದೀತು. ಸಮಾಧಾನ ಒಳಿತು.

ಧನು
ಮನೆ ಅಥವಾ ವೃತ್ತಿಯಲ್ಲಿ ಕೆಲವರ ಮನಸ್ಸನ್ನು ಅರಿತು ವ್ಯವಹರಿಸಿರಿ. ಅವರ ಇಚ್ಛೆಗೆ ವಿರುದ್ಧವಾಗಿ ಸಾಗಿದರೆ ರೋಷ ಎದುರಿಸುವಿರಿ. ಶಾಂತಿ ದೂರವಾದೀತು.

ಮಕರ
ನಿಮ್ಮ ಬಾಹ್ಯ ರೂಪಕ್ಕೆ ಹೆಚ್ಚು ಪ್ರಾಮುಖ್ಯ ಕೊಡಲು ಆರಂಭಿಸುವಿರಿ. ಅದಕ್ಕೆ ಕಾರಣ ಯಾರನ್ನೋ ಮೆಚ್ಚಿಸಲು ಹೊರಡುವಿರಿ.

ಕುಂಭ
ಕೆಲವು ಸಣ್ಣ ವಿಷಯ ಗಳಿಗೆ ಅನವಶ್ಯವಾಗಿ ಹೆಚ್ಚು ಚಿಂತಿಸುವಿರಿ. ವಾಸ್ತವದಲ್ಲಿ  ಅವು ಸಮಸ್ಯೆಗಳೇ ಅಲ್ಲ. ನೀವೇ ಅದನ್ನು ಸಮಸ್ಯೆಯಾಗಿಸಿದ್ದೀರಿ.

ಮೀನ
ನಿಮ್ಮ ಹಿಂದಿನ ಪರಿಶ್ರಮದ ಫಲವು ದೊರಕುವುದು. ಆದರೆ ವೃತ್ತಿ ವಿರೋಧಿಗಳು ನಿಮ್ಮ ವಿರುದ್ಧ ಕಾರ್ಯಾಚರಿಸುವರು. ಎಚ್ಚರದಿಂದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!