ದಿಗಂತ ವರದಿ ವಿಜಯಪುರ:
ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಮಂದಿಗೆ ಭಾನುವಾರ ತಡರಾತ್ರಿ 1.53ಕ್ಕೆ ಲಘು ಭೂಕಂಪನದ ಅನುಭವವಾಗಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ.
ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ಬಡಾವಣೆಯಲ್ಲಿ, ರಾತ್ರಿ ಏಕಾಏಕಿ ಜೂರಾದ ಸದ್ದಿನೊಂದಿಗೆ ಒಂದು ಸೆಕೆಂಡಿನಷ್ಟು ಭೂಮಿ ಕಂಪಿಸುತ್ತಿದ್ದಂತೆ, ಮನೆಯ ಹೊರಗಡೆ ಮಲಗಿದ್ದ ಜನರು, ಏಕಾಏಕಿ ಎದ್ದು ಗಾಬರಿಗೊಂಡು ಓಡುವಂತಾಗಿದೆ. ಅಲ್ಲದೆ ಈ ಭೂಮಿ ಕಂಪನದ ಸದ್ದಿಗೆ ಆಕಳು, ಕರು, ಶ್ವಾನಗಳು ಕೂಡ ಭೀತಿಗೊಂಡು ಕೆಲ ಹೊತ್ತು ಜೋರಾಗಿ ಚೀರಾಡಿದವು.