ದಿನಭವಿಷ್ಯ| ನಿಮಗೆ ಪ್ರಾಮುಖ್ಯತೆ ನೀಡದ ವ್ಯಕ್ತಿಗಳ ಜತೆ ಭಾವನಾತ್ಮಕ ಬಂಧ ಬಿಟ್ಟುಬಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಬಿಡುವಿಲ್ಲದ ದಿನ. ಒಂದಿಲ್ಲೊಂದು ಕಾರ್ಯದಲ್ಲಿ ಮಗ್ನ. ನೀವು ಬಯಸಿದ ವಿರಾಮ ಸಿಗುವುದಿಲ್ಲ. ಕೌಟುಂಬಿಕ ಬಿಕ್ಕಟ್ಟೊಂದು ಪರಿಹಾರ.

ವೃಷಭ
ದೂರ ಪ್ರಯಾಣ ಮಾಡುವವರು ಆರೋಗ್ಯದ ಕುರಿತು ಎಚ್ಚರ ವಹಿಸಬೇಕು. ಹಳೆಯ ಸಾಲವೊಂದು ಮರು ಪಾವತಿಯಾಗಲಿದೆ.

ಮಿಥುನ
ದುಡುಕಿನ ವರ್ತನೆ, ರೋಷದ ಮಾತು ಆತ್ಮೀಯ ಸಂಬಂಧಕ್ಕೆ ಧಕ್ಕೆ ತಂದೀತು. ಸಹನೆ ಕಾಯುವುದು ಅಗತ್ಯ. ಹಣದ ಮುಗ್ಗಟ್ಟು ಎದುರಿಸುವಿರಿ.

ಕಟಕ
ನಿಮಗೆ ಪ್ರಾಮುಖ್ಯತೆ ನೀಡದ ವ್ಯಕ್ತಿಗಳ ಜತೆ ಭಾವನಾತ್ಮಕ ಬಂಧ ಬಿಟ್ಟುಬಿಡಿ. ಅದರಿಂದ ನಿಮಗೆ ನೋವೇ ಹೆಚ್ಚು, ಅವರನ್ನು ಕಡೆಗಣಿಸುವುದೇ ಒಳಿತು.

ಸಿಂಹ
ಮುಖ್ಯ ವಿಷಯದಲ್ಲಿ ನೀವಿಂದು ತಳೆಯುವ ನಿರ್ಧಾರ ದೂರಗಾಮಿ ಪರಿಣಾಮ ಬೀರುವುದು. ಆಪ್ತರ ಸಂಗಡ ವಾಗ್ವಾದ ನಡೆದೀತು. ನೆಮ್ಮದಿ ಹಾಳು.

ಕನ್ಯಾ
ಇಂದು ಅದೃಷ್ಟ ನಿಮ್ಮ ಪರವಾಗಿಲ್ಲ. ಕೆಲವು ಕಾರ್ಯ ಕೈಗೂಡದು. ಆಪ್ತರು ನಿಮ್ಮನ್ನು ತಪ್ಪರ್ಥ ಮಾಡಿಕೊಂಡಾರು. ಸಹನೆಯಿಂದ ವರ್ತಿಸಿ.

ತುಲಾ
ಉದ್ಯೋಗದಲ್ಲಿ ಹೊಸ ಅವಕಾಶ. ವಿವೇಚಿಸಿ ನಿರ್ಧಾರ ತಾಳಿ. ಖಾಸಗಿ ವಿಷಯದಲ್ಲಿ ಸಮಸ್ಯೆ, ಚಿಂತೆ ಕಾಡುವುದು. ಪರಿಹಾರದ ದಾರಿ ತೋರದೆ ಅಶಾಂತಿ.

ವೃಶ್ಚಿಕ
ಯಾವುದೇ ಕಾರ್ಯ ಮಾಡುವುದಿದ್ದರೂ ಅದನ್ನು ಆನಂದಿಸಿ. ಕಾಟಾಚಾರದ ಧೋರಣೆ ಬೇಡ. ಸ್ನೇಹಿತರ ಬೇಡಿಕೆ ಈಡೇರಿಸಲು ಕಷ್ಟವಾದೀತು.

ಧನು
ಕೌಟುಂಬಿಕ ಉದ್ವಿಗ್ನತೆಗೆ ಕಾರಣವಾಗಿದ್ದ್ದ ವಿಷಯವೊಂದು ಇತ್ಯರ್ಥ ಕಾಣುವುದು. ಬಂಧುಗಳ ಸಹಕಾರ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಆರೋಗ್ಯ ಸ್ಥಿರ.

ಮಕರ
ನಿಷ್ಠೆಯಿಂದ ಕಾರ್ಯ ಎಸಗಿದರೆ ಎಲ್ಲವೂ ಫಲಪ್ರದ. ಅರೆಮನಸ್ಸಿನ ಕೆಲಸ ಫಲ ನೀಡದು. ಪ್ರೀತಿಪಾತ್ರರ ಜತೆಗೆ ಮನಸ್ತಾಪ ಸಂಭವ. ವಿವೇಚನೆಯಿರಲಿ.

ಕುಂಭ
ಕೌಟುಂಬಿಕ ವಿಷಯ ಇಂದು ಆದ್ಯತೆ ಪಡೆಯುವುದು. ಆದಾಯಕ್ಕಿಂತ ಹೆಚ್ಚಿನ ಖರೀದಿಗೆ ಉತ್ಸಾಹ ತೋರದಿರಿ. ಅದರಿಂದ ಹಣದ ಬಿಕ್ಕಟ್ಟು ಎದುರಿಸುವಿರಿ

ಮೀನ
ಮುಖ್ಯ ಕೆಲಸ ಮುಂದೂಡುತ್ತ್ತಾ ಬರುತ್ತಿದ್ದೀರಿ. ಇನ್ನಾದರೂ ಅದನ್ನು ಕೂಡಲೇ ಕೈಗೆತ್ತಿಕೊಳ್ಳಿ. ಇತರರ ಸಹಕಾರದ ನಿರೀಕ್ಷೆ ಮಾಡಬೇಡಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!