ದಿನಭವಿಷ್ಯ| ವಿವೇಚನೆಯಿಂದ ವರ್ತಿಸಿದರೆ ಒಳಿತು

ಮೇಷ
ಉತ್ಸಾಹದ ದಿನ. ನಿಮ್ಮ ಸಾಮರ್ಥ್ಯ ತೋರಲು ವಿಪುಲ ಅವಕಾಶ ದೊರೆಯುವುದು. ಕುಟುಂಬ ಸದಸ್ಯರ ಜತೆ ಅನವಶ್ಯಕ ವಾಗ್ವಾದಕ್ಕೆ ಇಳಿಯದಿರಿ.

ವೃಷಭ
ಕಾರ್ಯದೊತ್ತಡ. ಏಕಾಗ್ರತೆ ಕಳಕೊಳ್ಳದಿರಿ. ಆತ್ಮೀಯ ಸಂಬಂಧವೊಂದು ಮನಸ್ಸಿನ ನೆಮ್ಮದಿ ಕಲಕುವ ಬೆಳವಣಿಗೆ ಸೃಷ್ಟಿಸ ಬಹುದು.

ಮಿಥುನ
ಇಂದು ಆದಾಯವೂ ಇದೆ, ಖರ್ಚೂ ಅಕ. ಹಣದ ವ್ಯವಹಾರದಲ್ಲಿ ಹೆಚ್ಚು ವಿವೇಚನೆಯಿಂದ ವರ್ತಿಸಿ. ಆಧ್ಯಾತ್ಮಿಕ ವಿಚಾರಗಳು ಆಸಕ್ತಿ ಕೆರಳಿಸುತ್ತವೆ.

ಕಟಕ
ಮನೆಯಲ್ಲಿ ಹೊಂದಾಣಿಕೆಯ ಕೊರತೆ. ಇದರಿಂದಾಗಿ ವಾದವಿವಾದ ನಡೆದೀತು. ನೀವು ಸಹನೆ ವಹಿಸುವುದು ಮುಖ್ಯ. ಆರ್ಥಿಕ ಲಾಭ.

ಸಿಂಹ
ಕೆಲಸ. ವೃತ್ತಿ ಮತ್ತು ಖಾಸಗಿ ಬದುಕಲ್ಲಿ ಹೆಚ್ಚು ಸವಾಲು. ಧೃತಿಗೆಡದೆ ಎದುರಿಸಿ. ಎಲ್ಲವೂ ನಿಮಗೆ ಅನುಕೂಲವಾಗಿ ನಡೆಯುವುದು.

ಕನ್ಯಾ
ಉದ್ಯೋಗದಲ್ಲಿ ಪ್ರಗತಿ. ಹೊಸ ಅವಕಾಶಗಳು ಒದಗುವವು. ವಿವಾಹಾಂಕ್ಷಿಗಳಿಗೆ ಪೂರಕ ಬೆಳವಣಿಗೆ. ಬಾಂಧವ್ಯ ವೃದ್ಧಿ. ದೂರ ಪ್ರಯಾಣ ಸಂಭವ.

ತುಲಾ
ಭವಿಷ್ಯದ ಯೋಜನೆ ರೂಪಿಸಲು ಸಕಾಲ. ಎಲ್ಲವೂ ನೀವು ಬಯಸಿದಂತೆ ಸಾಗುವುದು. ಅಡ್ಡಿಗಳು ಒದಗಿದರೂ ತಾನಾಗಿ ನಿವಾರಣೆಯಾಗುವದು.

ವೃಶ್ಚಿಕ
ಸಾಂಸಾರಿಕ ಅಸಮಾಧಾನ. ಬಿಕ್ಕಟ್ಟು ಸಂಭವ. ಅದನ್ನು ನಿವಾರಿಸಲು ಮುಕ್ತ ಮಾತುಕತೆ ಮತ್ತು ಹೊಂದಾಣಿಕೆಯೇ ಪರಿಹಾರ.

ಧನು
ಕೆಲಸದಲ್ಲಿ ವಿಘ್ನಗಳು. ವೃತ್ತಿಗೆ ಸಂಬಂಸಿ ಪ್ರಮುಖ ನಿರ್ಧಾರ ತಾಳದಿರಿ. ಆಯ್ಕೆಯ ಸಾಧ್ಯತೆಗಳನ್ನು ಮುಕ್ತವಾಗಿಡಿ. ಆರ್ಥಿಕ  ಸುಧಾರಣೆ.

ಮಕರ
ಕೆಲಸ. ಹಾಗಾಗಿ ಸಂಜೆ ವೇಳೆಗೆ ತೀರಾ ಬಸವಳಿಯುವಿರಿ. ಕೌಟುಂಬಿಕವಾಗಿ ವಾಗ್ವಾದ ನಡೆದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ.

ಕುಂಭ
ಸಕಾಲದಲ್ಲಿ ಕೆಲಸ ಮುಗಿಸಿರಿ. ಯೋಜನೆ ರೂಪಿಸಿ ಮುಂದೆ ಹೆಜ್ಜೆ ಇಡಿ. ಇಲ್ಲವಾದರೆ ಎಲ್ಲವೂ ಅಸ್ತವ್ಯಸ್ತ ಆದೀತು. ಕೌಟುಂಬಿಕ ಉದ್ವಿಗ್ನತೆ.

ಮೀನ
ಕೆಲಸದ ಒತ್ತಡ ಕಡಿಮೆ. ಬಾಕಿ ಉಳಿದ ಕಾರ್ಯ ಪೂರೈಸಿರಿ. ಕೌಟುಂಬಿಕ ಪರಿಸರ ನೆಮ್ಮದಿ ತರುವುದು. ಹರಿತ ವಸ್ತುಗಳ ಬಗ್ಗೆ ಎಚ್ಚರವಿರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!