June 19, 2026
Friday, June 19, 2026
spot_img

‘ಪಾಪದ ಹಣದಿಂದ ರಾಜಕೀಯ ಮಾಡಿಲ್ಲ’: ಆರೋಪಗಳಿಗೆ ಗುಡುಗಿದ ಕುಮಾರಸ್ವಾಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಅಧಿಕಾರದಲ್ಲಿದ್ದಾಗಲೂ ಹಾಗೂ ಈಗ ಕೇಂದ್ರ ಸಚಿವರಾಗಿದ್ದರೂ ತಮ್ಮ ಸಹಿಯನ್ನು ಎಂದಿಗೂ ಮಾರಾಟಕ್ಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಆರೋಪಗಳಿಗೆ ತೀಕ್ಷ್ಣ ಉತ್ತರ

ತಮ್ಮ ರಾಜಕೀಯ ಜೀವನದ ಬಗ್ಗೆ ಪ್ರಮಾಣಪತ್ರ ಪಡೆಯುವ ಅಗತ್ಯ ಇಲ್ಲ ಎಂದು ಹೇಳಿದರು. ತಮ್ಮೊಂದಿಗೇ ಕೆಲಸ ಮಾಡಿ ಬಳಿಕ ಕಾಂಗ್ರೆಸ್ ಸೇರಿರುವ ಕೆಲವರು ತಮ್ಮ ಬಗ್ಗೆ ಬಹಿರಂಗಪಡಿಸುವುದಾಗಿ ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಸತ್ಯ ಏನೇ ಇದ್ದರೂ ಹೊರಬರಲಿ ಎಂದು ಸವಾಲು ಹಾಕಿದರು.

ರಾಜಕೀಯದ ವೆಚ್ಚದ ಬಗ್ಗೆ ಪ್ರಶ್ನೆ

ಚುನಾವಣೆಗಳನ್ನು ಕೇವಲ ವೈಯಕ್ತಿಕ ಆದಾಯದಿಂದ ಎದುರಿಸಲು ಸಾಧ್ಯವೇ ಎಂಬ ಪ್ರಶ್ನೆ ಎತ್ತಿದ ಕುಮಾರಸ್ವಾಮಿ, ಕೃಷಿ ಆದಾಯದಿಂದ ಮಾತ್ರ ಪಕ್ಷದ ಎಲ್ಲಾ ಖರ್ಚುಗಳನ್ನು ನಿರ್ವಹಿಸುವುದು ಅಸಾಧ್ಯ ಎಂದರು.

ಇದನ್ನೂ ಓದಿ:

ಲಾಟರಿ ಹಣದ ಆಮಿಷ ತಿರಸ್ಕರಿಸಿದ್ದೆ

ರಾಜ್ಯದಲ್ಲಿ ಲಾಟರಿ ವ್ಯವಸ್ಥೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ದೊಡ್ಡ ಮೊತ್ತದ ಆಮಿಷ ಬಂದಿದ್ದರೂ ಅದನ್ನು ನಿರಾಕರಿಸಿದ್ದೇನೆ ಎಂದು ಅವರು ಹೇಳಿದರು. ಅನೈತಿಕ ಹಣದ ಮೂಲಕ ರಾಜಕೀಯ ಮಾಡುವ ಮನೋಭಾವ ನನಗಿಲ್ಲ ಎಂದರು.

ಪಕ್ಷಕ್ಕಾಗಿ ಪಡೆದ ದೇಣಿಗೆ

ವಿಧಾನಪರಿಷತ್ ಹಾಗೂ ರಾಜ್ಯಸಭೆ ಚುನಾವಣೆ ಸಂದರ್ಭಗಳಲ್ಲಿ ಅಭ್ಯರ್ಥಿಗಳಿಂದ ಪಕ್ಷದ ಚಟುವಟಿಕೆಗಳಿಗೆ ದೇಣಿಗೆ ಸ್ವೀಕರಿಸಿದ್ದೇನೆ. ಆದರೆ ಆ ಹಣವನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸದೇ ಪಕ್ಷದ ನಿರ್ವಹಣೆಗೆ ಮಾತ್ರ ವಿನಿಯೋಗಿಸಲಾಗಿದೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ತಮ್ಮ ರಾಜಕೀಯ ಜೀವನ ಪಾರದರ್ಶಕತೆಯ ಮೇಲೆ ನಿಂತಿದ್ದು, ಜನರ ವಿಶ್ವಾಸವೇ ತಮ್ಮ ದೊಡ್ಡ ಶಕ್ತಿ ಎಂದು ಕುಮಾರಸ್ವಾಮಿ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !