ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಮ್ ಆದ್ಮಿ ಸಂಸದ ಹರ್ಭಜನ್ ಸಿಂಗ್ ನಾನು ಯಾವ ವಿಷಯಕ್ಕೂ ಕೇರ್ ಮಾಡೋದಿಲ್ಲ, ಪ್ರಾಣಪ್ರತಿಷ್ಠೆ ವೀಕ್ಷಿಸಲು ಅಯೋಧ್ಯೆಗೆ ಹೋಗೇ ಹೋಗುತ್ತೇನೆ ಎಂದು ಹೇಳಿದ್ದಾರೆ.
ವಿಪಕ್ಷಗಳ ಒಕ್ಕೂಟ ಅಯೋಧ್ಯೆಯ ಕಾರ್ಯಕ್ರಮ ಬಹಿಷ್ಕರಿಸಿದೆ. ಯಾವ ಪಕ್ಷದವರು ಹೋಗ್ತಾರೋ ಬಿಡ್ತಾರೋ ಬೇಕಿಲ್ಲ. ನಾನು ಮಾತ್ರ ಕಾರ್ಯಕ್ರಮಕ್ಕೆ ಹೋಗುತ್ತೇನೆ. ನಾನು ರಾಮಭಕ್ತ ಹೀಗಾಗಿ ನನ್ನನ್ನು ತಡೆಯೋಕಾಗೋದಿಲ್ಲ ಎಂದಿದ್ದಾರೆ.
ಐತಿಹಾಸಿಕ ದಿನಕ್ಕೆ ವರ್ಷಗಳಿಂದ ಕಾದಿದ್ದೇವೆ, ನಾನು ಹೋಗುತ್ತೇನೆ, ಇದರಿಂದ ಸಮಸ್ಯೆಯಾದರೆ ಏನಾದ್ರೂ ಮಾಡಬಹುದು ಎಂದು ಹರ್ಭಜನ್ ಹೇಳಿದ್ದಾರೆ.