ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯರ ’ಪ್ರಧಾನಿ ನರೇಂದ್ರ ಮೋದಿ ಮುಂದೆ ಸಿಎಂ ಬೊಮ್ಮಾಯಿ ನಾಯಿಮರಿ ರೀತಿ ಇರುತ್ತಾರೆ’ ಹೇಳಿಕೆ ಸಾಕಷ್ಟು ಸಂಚಲನ ಮೂಡಿಸಿದ್ದು, ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಆದರೆ ಇದೀಗ ಸಿದ್ದರಾಮಯ್ಯ ಉಲ್ಟಾ ಹೊಡೆದಿದ್ದು, ನಾನು ನಾಯಿಮರಿ ಎಂದು ಹೇಳೇ ಇಲ್ಲ ಎಂದಿದ್ದಾರೆ. ನಾಯಿಮರಿ ಅನ್ನೋದು ದೊಡ್ಡ ಪದವೇನೂ ಅಲ್ಲ, ನಾಯಿ ನಿಯತ್ತಿನ ಪ್ರಾಣಿ, ಇದೇಕೆ ಇಷ್ಟು ಚರ್ಚೆಯಾಗುತ್ತಿದೆ ಎಂದಿದ್ದಾರೆ.
ನನ್ನನ್ನು ಟಗರು, ಹುಲಿಯಾ ಎಂದೆಲ್ಲಾ ಹೇಳ್ತಾರೆ, ಬಿಎಸ್ವೈರನ್ನು ರಾಜಾಹುಲಿ ಅಂತ ಹೇಳ್ತೇವೆ ಇದಕ್ಕೆ ಯಾರಿಗೂ ಬೇಸರ ಇಲ್ಲ. ನಿಯತ್ತಿನ ನಾಯಿ ರೀತಿ ಕೇಂದ್ರದಿಂದ ನಮ್ಮ ಪಾಲಿನ ಅನುದಾನ ತರಬೇಕು ಅಂತ ಹೇಳಿದ್ದೇನೆ ಅಷ್ಟೆ ಎಂದಿದ್ದಾರೆ.