ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ತಂಡದ ವಿಕೆಟ್ಕೀಪರ್, ಬ್ಯಾಟರ್ ರಿಷಭ್ ಪಂತ್ ಅವರಿಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದ್ದಾರೆ. ಈ ಅನಿರೀಕ್ಷಿತ ಅವಘಡದಿಂದಾಗಿ ಅವರು ಹಾಲಿ ಕ್ರಿಕೆಟ್ ಋತುವಿನಲ್ಲಿ ಆಡುವುದು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.
ಅದ್ರ ಜೊತೆಗೆ ಕೆಲವೇ ತಿಂಗಳಲ್ಲಿ ಆರಂಭವಾಗಲಿರುವ ಐಪಿಎಲ್ ಹಾಗೂ ಮುಂದಿನ ಏಕ ದಿನ ವಿಶ್ವ ಕಪ್ನಲ್ಲಿ ಆಡುವುದು ಸಾಧ್ಯವಾಗುವುದಿಲ್ಲ.
ಪಂತ್ ಅಲಭ್ಯ ಡೆಲ್ಲಿ ಕ್ಯಾಪಿಟಲ್ಸ್ ಗೆ ಕಾಡುತ್ತಿದ್ದು, ಈ ಕುರಿತು ರಿಕಿ ಪಾಂಟಿಂಗ್ ಮಾತನಾಡಿದ್ದಾರೆ.
ಎರಡು ದಿನಗಳ ಹಿಂದೆ ನಾನು ರಿಷಭ್ ಪಂತ್ ಜತೆ ಮಾತನಾಡಿದ್ದೆ. ಅವರು ಗುಣಮುಖರಾಗುತ್ತಿದ್ದಾರೆ. ಇದೊಂದು ಆಘಾತಕಾರಿ ಘಟನೆ. ಎಲ್ಲರೂ ಆತಂಕ ಪಡಬೇಕಾದ ಸಂಗತಿ. ಈಗ ಅವರನ್ನು ಗುಣಮುಖರಾಗಲು ಏಕಾಂಗಿಯಾಗಿ ಬಿಡುವುದು ಉತ್ತಮ ಎಂದು ಪಾಂಟಿಂಗ್ ಹೇಳಿದ್ದಾರೆ.
ಅವರು 2023ನೇ ಆವೃತ್ತಿಯ ಐಪಿಎಲ್ನಲ್ಲಿ ಆಡುವುದು ಸಾಧ್ಯವಿಲ್ಲ ಎಂದು ಅನಿಸುತ್ತದೆ. ಹೀಗಾಗಿ ಅವರ ಪರ್ಯಾಯ ಆಟಗಾರರಿಗೆ ಹುಡುಕಾಟ ನಡೆಸುತ್ತಿದ್ದೇವೆ. ವಾಸ್ತವದಲ್ಲಿ ಅವರಿಗೆ ಪರ್ಯಾಯ ಇನ್ಯಾರೂ ಇಲ್ಲ. ಹೀಗಾಗಿ ರಿಷಭ್ ಪೂರ್ತಿಯಾಗಿ ಗುಣಮುಖರಾಗದೇ ಹೋದರೂ ಅವರು ತಂಡದ ಜತೆ ಇರುವುದನ್ನು ನಾನು ಬಯಸುತ್ತೇನೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.