ಹೊಸದಿಗಂತ ಡಿಜಿಟಲ್ ಡೆಸ್ಕ್:
ಫಯಾಜ್ ತಂದೆ ತಾಯಿ ಕ್ಷಮಿಸಿ ಕ್ಷಮಿಸಿ ಅಂತ ಲಕ್ಷ ಸಲ ಕೇಳಿದ್ರೆ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗತ್ತಾ? ಸತ್ತ ನನ್ನ ಮಗಳು ವಾಪಾಸ್ ಬರ್ತಾಳಾ? ಎಂದು ನೇಹಾ ತಂದೆ ನಿರಂಜನ್ ಹಿರೇಮಠ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫಯಾನ್ ನಮ್ಮನೆಗೆ ಬಂದು ಮಗಳನ್ನು ಮದುವೆ ಮಾಡಿಕೊಡಿ ಅಂತ ಯಾವತ್ತೂ ಕೇಳಿಲ್ಲ. ಈಗೇನೇನೋ ಸುಳ್ಳು ಸುಳ್ಳು ಹೇಳಿಕೆ ಕೊಡ್ತಿದ್ದಾರೆ. ಫಯಾಜ್ ಪೋಷಕರು ವಿದ್ಯಾವಂತರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು, ಅವರಿಗೆ ತಮ್ಮ ಮಗ ವಿಕೃತಿ ಮನಸ್ಥಿತಿಯವನು ಅಂತ ಗೊತ್ತಿತ್ತು, ಆ ಸಂಗತಿಯನ್ನು ಅವರು ನಮ್ಮಿಂದ ಮುಚ್ಚಿಟ್ಟಿದ್ದರು ಅಷ್ಟೆ ಎಂದಿದ್ದಾರೆ.
ಮಗನ ಕೆಟ್ಟ ಬುದ್ಧಿ ಬಗ್ಗೆ ತಂದೆ ತಾಯಿಗೆ ಗೊತ್ತಿತ್ತು. ಅದನ್ನು ನಮ್ಮ ಗಮನಕ್ಕೆ ತಂದಿದ್ದರೆ ನನ್ನ ಮಗಳು ಇನ್ನೂ ಬದುಕಿರುತ್ತಿದ್ದಳು. ಅವರ ಕ್ಷಮೆಯಿಂದ ಈಗ ಆಗೋದಾದರೂ ಏನು? ಅದರಿಂದ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆಯೆ? ಅವಳು ಬದುಕಿ ಬರುತ್ತಾಳೆಯೇ? ಎಂದು ನಿರಂಜನ ಪ್ರಶ್ನಿಸಿದರು.
ತನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಫಯಾಜ್ ತಂದೆತಾಯಿಗಳು ಅವನನ್ನು ಜಾಮೀನಿನ ಮೇಲೆ ಹೊರತಂದು ನೇಹಾನ ಕೊಂದಂತೆ ಅವನನ್ನೂ ಚಾಕುವಿನಲ್ಲಿ ಇರಿದು ಕೊಲ್ಲಬೇಕು ಎಂದು ಹೇಳಿದ್ದಾರೆ.