ಹೊಸದಿಗಂತ ಡಿಜಿಟಲ್ ಡೆಸ್ಕ್
ಜಾರ್ಖಂಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಶೇಷ ಜಾರಿ ನಿರ್ದೇಶನಾಲಯ ನ್ಯಾಯಾಲಯವು ಬುಧವಾರ ಆರೋಪಿ ಪೂಜಾ ಸಿಂಘಾಲ್ ಅವರನ್ನು ಜೂನ್ 8ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇಡಿ ಮಂಗಳವಾರ ಜಾರ್ಖಂಡ್ನ ರಾಂಚಿಯ ಆರು ಸ್ಥಳಗಳ ಮೇಲೆ ದಾಳಿ ನಡೆಸಿತ್ತು. 2009 ಮತ್ತು 2010ರಲ್ಲಿ ರಾಜ್ಯದ ಖುಂಟಿ ಜಿಲ್ಲೆಯ ಉಪ ಆಯುಕ್ತರಾಗಿ ಸಿಂಘಾಲ್ ಸೇವೆ ಸಲ್ಲಿಸಿದ್ದಾರೆ.ಇವರನ್ನು ಮೇ 11ರಂದು ಇಡಿ ಬಂಧಿಸಿತ್ತು.
ಜಾರ್ಖಂಡ್ ಸರ್ಕಾರವು ಮೇ 12ರಂದು ಸಿಂಘಾಲ್ ಅವರನ್ನು ಕೆಲಸದಿಂದ ಅಮಾನತುಗೊಳಿಸಿತು. ಈ ತಿಂಗಳ ಆರಂಭದಲ್ಲಿ, ಆಕೆಯ ಪತಿ ಅಭಿಷೇಕ್ ಝಾ ಒಡೆತನದ ರಾಂಚಿಯ ಪಲ್ಸ್ ಆಸ್ಪತ್ರೆಯ ಮೇಲೆ ಇಡಿ ದಾಳಿ ನಡೆಸಿತ್ತು.