ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದ್ದು, ದಿನಬಳಕೆ ವಸ್ತುಗಳ ಬೆಲೆ ಏಕಾಏಕಿ ಏರಿಕೆ ಕಂಡಿದೆ.
ಕರ್ಫ್ಯೂ ಪರಿಣಾಮ ಅಡುಗೆ ಅನಿಲ ಹಾಗೂ ಪೆಟ್ರೋಲ್ ಲಭ್ಯತೆ ಕಡಿಮೆಯಾಗಿದ್ದು, ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟವಾಗುತ್ತಿದೆ. ಪ್ರತಿ ಯುನಿಟ್ಗೆ ಎರಡು ಸಾವಿರ ರೂಪಾಯಿ ಕೇಳಲಾಗುತ್ತಿದ್ದು, ಪೆಟ್ರೋಲ್ ಲೀಟರ್ ಬೆಲೆ 250 ರೂಪಾಯಿ ಆಗಿದೆ.
ಇನ್ನು ತರಕಾರಿ, ಅಕ್ಕಿ ಬೆಲೆಯೂ ಹೆಚ್ಚಾಗಿದ್ದು, ಗಾಯದ ಮೇಲೆ ಬರೆ ಎಳೆದಂಥ ಪರಿಸ್ಥಿತಿಯಲ್ಲಿ ಮಣಿಪುರ ಜನತೆ ಒದ್ದಾಡುತ್ತಿದ್ದಾರೆ.