ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಕುಸಿತದಿಂದಾಗಿ ರಸ್ತೆ ಕೊಚ್ಚಿಹೋಗಿದ್ದು, ಸುಮಾರು 300 ಪ್ರಯಾಣಿಕರು ಸಿಕ್ಕಿಬಿದ್ದಿರುವ ಘಟನೆ ಉತ್ತರಾಖಂಡದ ಪಿಥೋರ್ಘರ್ ಜಿಲ್ಲೆಯಲ್ಲಿ ನಡೆದಿದೆ. ಲಖನ್ಪುರ ಬಳಿಯ ಲಿಪುಲೇಖ್-ತವಾಘಾಟ್ ರಸ್ತೆಯಲ್ಲಿ 100 ಮೀಟರ್ ಭೂಕುಸಿತ ಸಂಭವಿಸಿದೆ. ಧಾರ್ಚುಲಾ ಮತ್ತು ಗುಂಜಿ ಎರಡೂ ಪ್ರದೇಶಗಳಲ್ಲಿ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ದುರಸ್ತಿ ನಂತರ ಎರಡು ದಿನಗಳ ಹಿಂದೆ ರಸ್ತೆಯನ್ನು ತೆರೆಯಲಾಗಿದೆ. ಇದೇ ವೇಳೆ ಎಲ್ಲಾ ಯಾತ್ರಾರ್ಥಿಗಳಿಗೆ ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. “ಯಾತ್ರಾರ್ಥಿಗಳು ದಯವಿಟ್ಟು ಸುರಕ್ಷಿತ ಸ್ಥಳಗಳಲ್ಲಿ ಇರಿ. ಅನಗತ್ಯವಾಗಿ ಪ್ರಯಾಣಿಸಬೇಡಿ, ಸುರಕ್ಷಿತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿ. ಹವಾಮಾನ ಸ್ಪಷ್ಟವಾಗಿದೆ ಇದ್ದಾಗ ಮಾತ್ರ ಪ್ರಯಾಣಿಸಿ’ ಎಂದು ಪೊಲೀಸರು ತಿಳಿಸಿದರು. “ಯಮುನೋತ್ರಿ ಮತ್ತು ಗಂಗೋತ್ರಿ ಧಾಮ ಯಾತ್ರೆಗೆ ಬರುವ ಎಲ್ಲಾ ಭಕ್ತರು ಹವಾಮಾನ ಮುನ್ಸೂಚನೆಯನ್ನು ತೆಗೆದುಕೊಂಡ ನಂತರ ತಮ್ಮ ಪ್ರಯಾಣವನ್ನು ಯೋಜಿಸಬೇಕು. ಪ್ರಯಾಣಿಸುವಾಗ ರೈನ್ ಕವರ್, ಛತ್ರಿ, ಉಣ್ಣೆ/ಬೆಚ್ಚಗಿನ ಬಟ್ಟೆಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ” ಎಂದು ಸಲಹೆ ನೀಡಿದರು.
ಇದಲ್ಲದೇ ರಾಜ್ಯದಲ್ಲಿ ಮಳೆಯ ಎಫೆಕ್ಟ್ ಕೂಡ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಅಲ್ಮೋರಾ, ಬಾಗೇಶ್ವರ್, ಚಮೋಲಿ, ಚಂಪಾವತ್, ಡೆಹ್ರಾಡೂನ್, ಗರ್ವಾಲ್, ಹರ್ದ್ವಾರ್, ನೈನಿತಾಲ್, ಪಿಥೋರ್ಘರ್, ರುದ್ರಪ್ರಯಾಗ, ತೆಹ್ರಿ ಗರ್ವಾಲ್, ಉಧಮ್ ಸಿಂಗ್ ನಗರ ಮತ್ತು ಉತ್ತರಕಾಶಿ ಜಿಲ್ಲೆಗಳಲ್ಲಿ ಧೂಳಿನ ಬಿರುಗಾಳಿ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.