ಹೊಸದಿಗಂತ ವರದಿ, ವಿಜಯಪುರ :
ಫೇಸ್ಬುಕ್ ನಲ್ಲಿ ಅವಾಚ್ಯವಾಗಿ ನಿಂದನೆ ಮಾಡಿರುವ ಕಾರಣಕ್ಕೆ ಯುವಕನೊಬ್ಬನನ್ನು 7 ಜನರು ಕೂಡಿಕೊಂಡು ಹತ್ಯೆಗೈದಿರುವ ಘಟನೆ ವಿಜಯಪುರ ತಾಲೂಕಿನ ಕುಮಟಗಿಯಲ್ಲಿ ನಡೆದಿದೆ.
ಇಲ್ಲಿನ ರಮೇಶ ಶ್ರೀಮಂತ ದಾರಾಸಿಂಗ್ ಹತ್ಯೆಯಾಗಿರುವ ಯುವಕ.
ಆರೋಪಿ ಜಿತೇಂದ್ರ ಕಾಂಬ್ಳೆ, ರಘು ಕಣಮೇಶ್ವರ ಸೇರಿದಂತೆ 7 ಜನರು ಕೂಡಿಕೊಂಡು ರಮೇಶನ್ನು ಆಯುಧದಿಂದ ಕೊಚ್ಚಿ ಹತ್ಯೆಗೈದು ಕುಮಟಗಿಯ ಹರಿಜನ ಎಂಬುವವರ ಮನೆಯ ಎದುರು ಶವವನ್ನು ಎಸೆದು ಹೋಗಿದ್ದಾರೆ ಎಂದು ದೂರು ನೀಡಲಾಗಿದೆ.
ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.